Kannada NewsLatest

ಮತ್ತೆ ವಿವಾದಕ್ಕೀಡಾದ ಮಾಜಿ ಸಚಿವ ವಿನಯ್ ಕುಲ್ಕರ್ಣಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ್ ಕುಲ್ಕರ್ಣಿ ಮತ್ತೊಂದು ವಿವಾದ ಎಳೆದುಕೊಂಡಿದ್ದಾರೆ.

ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ವಿನಯ್ ಕುಲ್ಕರ್ಣಿ, ಜೈಲಿನ ಸೆಲ್ ನಲ್ಲೇ ರಾಜಾತಿಥ್ಯ ಪಡೆದು ಆರಾಮವಾಗಿದ್ದಾರೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಜೈಲಿನಲ್ಲಿರುವ ರೌಡಿ ಶೀಟರ್ ಒಬ್ಬನ ಜೊತೆ ಕಾಲ ಕಳೆಯುತ್ತಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.

Home add -Advt

ಮಂಗಳೂರು ಮೂಲದ ರೌಡಿ ಶೀಟರ್ ವಿಕ್ಕಿ ಪೂಜಾರಿ ಜೊತೆ ವಿನಯ್ ಕುಲ್ಕರ್ಣಿ ಕಾಲ ಕಳೆಯುತ್ತಿದ್ದು, ತನ್ನ ಸೆಲ್ ಗೆ ಕರೆಸಿಕೊಂಡು ಆತನೊಂದಿಗೆ ಸ್ನೇಹದಿಂದರುವುದು ಹೊಸ ವಿವಾದ ಸೃಷ್ಟಿಸಿದೆ. ವಿಕ್ಕಿ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ, ಜೈಲಿನೊಳಗೇ ಆರೋಪಿಯೊಬ್ಬನನ್ನು ಹತ್ಯೆಗೈದ ಪ್ರಕರಣಗಳಿದ್ದು, ಹಲವು ವರ್ಷಗಳಿಂದ ಜೈಲಿನಲ್ಲಿದ್ದಾನೆ ಎನ್ನಲಾಗಿದೆ.

 

Related Articles

Back to top button