Belagavi NewsBelgaum NewsKannada NewsKarnataka NewsPolitics

*ವಿಜನ್ ಕರ್ನಾಟಕ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ: ಎರಡನೆ ದಿನ ಎಂಟು ಸಾವಿರ ಜನರ ಭೇಟಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಕೆ.ಎಲ್.ಇ.ಜೀರಗೆ ಸಭಾಂಗಣದಲ್ಲಿ ನಡೆಯುತ್ತಿರುವ “ವಿಜನ್ ಕರ್ನಾಟಕ 2025 “ಪ್ರದರ್ಶನದ ಎರಡನೇ ದಿನ ಎಂಟು ಸಾವಿರ ಜನ ಭೇಟಿ ‌ನೀಡಿದ್ದಾರೆ.

ಸಂಸದ ಜಗದೀಶ ಶೆಟ್ಟರ ಇವರ ಪ್ರೇರಣೆ ಮತ್ತು ಮಾರ್ಗ ದರ್ಶನದಂತೆ ದಿಲ್ಲಿಯಲ್ಲಿಯ ಪ್ರಯಾಸ ಎಕ್ಸಿಬಿಷನ್ ಪರವಾಗಿ ಕೆ.ಎಲ್.ಇ. ಕನ್ವೆನ್ಸನ ಹಾಲ್ ನಲ್ಲಿ ನಡೆಯುತ್ತಿರುವ ‘ವಿಜನ್ ಕರ್ನಾಟಕ 2025’ ರ ಮಹಾಪ್ರದರ್ಶನಕ್ಕೆ ಎರಡನೇ ದಿನದಂದು ಬೆಳಗಾವಿಯ ಎಂಟು ಸಾವಿರ ಜನರು ಪ್ರದರ್ಶನವನ್ನು ವೀಕ್ಷಿಸಿದರು. 

ಪ್ರದರ್ಶನವು ಜೂನ್ 13 ರಂದು ಶೆಟ್ಟರ ಇವರ ಉಪಸ್ಥಿತಿಯಲ್ಲಿ ಸಮಾರೋಪಗೊಳ್ಳಲಿದೆ. ಬೆಳಗಾವಿಯಲ್ಲಿಯ ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಈ ಪ್ರದರ್ಶನ ನೋಡಿ ಆನಂದಿಸಿದರು. 

ಮೊದಲನೆ ದಿನದ ಯಶಸ್ವಿ ಪ್ರತಿಕ್ರಿಯೆಯಿಂದ ಎರಡನೆ ದಿನವೂ ವಿದ್ಯಾರ್ಥಿಗಳು, ಪಾಲಕರು, ಬೆಳಗಾವಿಯಲ್ಲಿಯ ವ್ಯಾಪಾರಸ್ಥರು, ಉದ್ಯೋಜಕರು ಪ್ರದರ್ಶನಕ್ಕೆ ಭೇಟಿ ಕೊಟ್ಟು ಸಂತಸ ವ್ಯಕ್ತಪಡಿಸಿದರು. ಈ ಪ್ರಕಾರದ ಪ್ರದರ್ಶನ ಬೆಳಗಾವಿಯಲ್ಲಿ ಮೊದಲ ಬಾರಿ ಪ್ರದರ್ಶನಗೊಳ್ಳುತ್ತಿದೆ ಎಂದು ಹೇಳಿದರು.

Home add -Advt

ಮೂರು ದಿನಗಳ ಕಾಲ ನಡೆಯುವ ಈ ಪ್ರದರ್ಶನವು ಶುಕ್ರವಾರ ದಿ. 13 ರಂದು ಮಧ್ಯಾಹ್ನ 1-30 ಕ್ಕೆ ಮುಕ್ತಾಯಗೊಳ್ಳಲಿದೆ.

Related Articles

Back to top button