
ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಮುಸ್ಲಿಮರನ್ನು ವಿರೋಧಿಸುವುದಿಲ್ಲ ಆದರೆ ನಾವು ಕಾಂಗ್ರೆಸ್ನ ಮುಸ್ಲಿಂ ತುಷ್ಟಿಕರಣ ರಾಜಕೀಯವನ್ನು ವಿರೋಧಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಥವಾ ಪ್ರಧಾನಿ ನರೇಂದ್ರ ಮೋದಿ ಮುಸ್ಲಿಮರ ವಿರೋಧಿಗಳು ಅಲ್ಲ. ಆದರೆ ಕಾಂಗ್ರೆಸ್ನ ಮುಸ್ಲಿಂ ತುಷ್ಟಿಕರಣ ರಾಜಕೀಯವನ್ನು ನಾವು ವಿರೋಧಿಸುತ್ತೇವೆ. ನಿನ್ನೆ ನಾನು ಡಿಸಿಎಂ ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ಗಮನಿಸಿದೆ. ಅವರು ಮುಸ್ಲಿಂ ಸಮುದಾಯಕ್ಕೆ ಎಂಎಲ್ಸಿ ಮತ್ತು ರಾಜ್ಯಸಭಾ ಸಂಸದರನ್ನು ನೀಡುವಂತೆ ಅವರು ಬಿಜೆಪಿಗೆ ಸವಾಲು ಹಾಕಿದ್ದರು ಎಂದು ತಿಳಿಸಿದರು.
ಆದರೆ ನಾನು ಡಿಕೆಶಿ ಅವರಿಗೆ ಕೆಲ ವಿಚಾರಗಳನ್ನು ನೆನಪಿಸಲು ಬಯಸುತ್ತೇನೆ. ಡಾ. ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿಯಾಗಿ ಮತ್ತು ನಲ್ಮಾ ಹೆಫ್ತುಲ್ಲಾ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಮತ್ತು ಮೊಹಮ್ಮದ್ ಆರಿಫ್ ಖಾನ್ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಿದ್ದು ಬಿಜೆಪಿ ಎಂದು ಹೇಳಿದರು.
ಈ ವಿಷಯದ ಬಗ್ಗೆ ನಮಗೆ ಸ್ಪಷ್ಟತೆ ಇದೆ. ಕಾಂಗ್ರೆಸ್ನ ಮುಸ್ಲಿಂ ತುಷೀಕರಣ ರಾಜಕೀಯವನ್ನು ನಾವು ಖಂಡಿತವಾಗಿಯೂ ವಿರೋಧಿಸುತ್ತೇವೆ. ಸರ್ಕಾರಿ ಒಪ್ಪಂದಗಳಲ್ಲಿ 4% ಮೀಸಲಾತಿ ನೀಡುವ ನಿಬಂಧನೆ ಎಲ್ಲಿದೆ? ಇದು ಸಾಂವಿಧಾನಿಕವೇ? ನಾವು ಈ ಕ್ರಮವನ್ನು ವಿರೋಧಿಸಲಿದ್ದೇವೆ ಎಂದು ವಿಜಯೇಂದ್ರ ಹೇಳಿದರು.