Kannada NewsKarnataka News

ಮರಕ್ಕೆ ವಿಂಗರ್ ಡಿಕ್ಕಿ: 7 ಪ್ರಯಾಣಿಕರಿಗೆ ಗಾಯ


ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಕೇರಳದ ವೆಲಂಕಣಿಯಿಂದ ಗೋವಾದತ್ತ ಹೊರಟಿದ್ದ ಟಾಟಾ ವಿಂಗರ್ ಪ್ರಯಾಣಿಕರ ವಾಹನ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ರಸ್ತೆ ಅಪಘಾತದಲ್ಲಿ ವೆಲಂಕಣಿ ಯಾತ್ರೆ ಮುಗಿಸಿ
ಹಿಂತಿರುಗುತ್ತಿದ್ದ ಏಳು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಧಾರವಾಡ-ರಾಮನಗರ ರಾಜ್ಯ ಹೆದ್ದಾರಿಯ ತಾಲ್ಲೂಕಿನ ನಾಗರಗಾಳಿ ಗ್ರಾಮದ ಬಳಿ ಗುರುವಾರ ಸಂಭವಿಸಿದ ಈ ಅಪಘಾತದಲ್ಲಿ ವಾಹನದಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ಆರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇವರೆಲ್ಲರೂ ಪ್ರಾಣಾಪಾಯದೊಂದಿಗೆ ಪಾರಾಗಿದ್ದಾರೆ.

ಮುಂದಿನ ಆಸನದಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಗೋವಾದ ಮಾಪುಸಾ ನಗರದ ಜಾನ್ ಫರ್ನಾಂಡಿಸ್ (38) ಅವರ ತಲೆಗೆ ಮರ ಅಪ್ಪಳಿಸಿದ್ದರಿಂದ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು
ಘಟನೆಯನ್ನು ದಾಖಲಿಸಿ ತನಿಖೆ ಕೈಗೊಂಡಿರುವ ಖಾನಾಪುರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

https://pragati.taskdun.com/bjp-government-has-withdrawn-the-case-against-workers-of-pfi-and-sdpi-organizations/


Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button