Kannada NewsKarnataka NewsLatest

*ಅರಿಶಿನ ಶಾಸ್ತ್ರದ ಸಂಭ್ರಮದ ವೇಳೆ ದುರಂತ; ಕಾಲು ಜಾರಿ ಬಾವಿಗೆ ಬಿದ್ದ ಯುವಕ ಸಾವು*

ಪ್ರಗತಿವಾಹಿನಿ ಸುದ್ದಿ: ತಾನೊಂದು ಬಗೆದರೆ ದೈವ ಒಂದು ಬಗೆದೀತೆ ಎಂಬಂತೆ ಕಬ್ಬೂರ ಪಟ್ಟಣದ ಶೇರಿ ಕೋಡಿ ತೋಟದ ಮನೆಯಲ್ಲಿ ಎಲ್ಲವು ಅಂದುಕೊಂಡಂತೆ ಆದರೆ ಶುಕ್ರವಾರ ಅದ್ದೂರಿಯಾಗಿ ಮದುವೆ ಜರುಗುತ್ತಿತ್ತು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು.

ಗುರುವಾರ ರಾತ್ರಿ 9ರ ಸುಮಾರಿಗೆ ಅರಿಸಿನ ಆಡುವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತ್ತು ಆದರೆ ಮದುಮಗನ ಮನೆಯ ಪಕ್ಕದ ಮನೆಯ ಯುವಕನೊಬ್ಬ ತನಗೆ ಆರಿಸಿನ ಹಚ್ಚುತ್ತಾರೆ ಎಂದು ಹೇದರಿ ಓಡುವ ಭರದಲ್ಲಿ ಕತ್ತಲಲ್ಲಿ ಮನೆಯ ಪಕ್ಕದಲ್ಲಿ ಇದ್ದ ಬಾವಿಗೆ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಜರುಗಿದೆ.

ಮೃತಪಟ್ಟ ಯುವಕ ಮಾಳಪ್ಪ. ಮಾರುತಿ. ಬಾಡದ (18) ಈತ ತನ್ನ ಮನೆಯ ಪಕ್ಕದ ಸುರೇಶ. ರೇವಪ್ಪ. ಕುರಬೇಟ ಇವನ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದು ರಾತ್ರಿ ಅರಿಸಿನ ಕಾರ್ಯಕ್ರಮದಲ್ಲಿ ಅರಿಸಿನ ತನಗೆ ಹಚ್ಚುತ್ತಾರೆ ಎಂಬ ಭಯದಲ್ಲಿ ಮದುವೆ ಮನೆಯ ಪಕ್ಕದಲ್ಲಿ ಇದ್ದ ಬಾವಿಯಲ್ಲಿ ಆಯಾತಪ್ಪಿ ಬಿದ್ದು ಮೃತಪಟ್ಟಿದ್ದಾನೆ. ಈ ಘಟನೆ ಹಿನ್ನೆಯಲ್ಲಿ ಅದ್ದೂರಿಯಾಗಿ ನಡೆಯಬೇಕಿದ್ದ ಮದುವೆ ನಿಂತು ಹೋಗಿದೆ. ಫಟನಾ ಸ್ಥಳಕ್ಕೆ ಚಿಕ್ಕೋಡಿ ಪಿ ಎಸ್ ಐ ಬಸಗೌಡ ನೇರ್ಲಿ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Related Articles

Back to top button