Belagavi NewsBelgaum NewsKannada NewsKarnataka News
*ಯಂಗ್ ಮಾಸ್ಟರ್ಸ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ*
![](https://pragativahini.com/wp-content/uploads/2025/02/music.jpg)
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸ್ವರ ಮಲ್ಹಾರ ಫೌಂಡೇಶನ್ ವತಿಯಿಂದ ಫೆಬ್ರವರಿ 16, ಭಾನುವಾರ ಬೆಳಗಾವಿಯಲ್ಲಿ ಯುವ ಕಲಾವಿದರಿಂದ ಯಂಗ್ ಮಾಸ್ಟರ್ಸ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 9 ಗಂಟೆಯಿಂದ ಬುಧವಾರ ಪೇಟೆಯ ಪಂಡಿತ್ ರಾಮಭಾವು ಬಿಜಾಪುರೆ ಸ್ವರ ಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ದರ್ಶನ್ ಮೆಳವಂಕಿ, ಕೀರ್ತನ ಹೊಳ್ಳ, ಪುಣೆಯ ಶಾಶ್ವತಿ ಚವ್ಹಾಣ, ಕಾರವಾರದ ಸಂಕೇತ್ ಸಪ್ರೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ನಾರಾಯಣ ಗಣಾಚಾರಿ ಮತ್ತು ಅಂಗದ ದೇಸಾಯಿ ಇವರು ತಬಲಾ ಹಾಗೂ ಸಾರಂಗ್ ಕುಲ್ಕರ್ಣಿ, ತ್ರಿಗುಣ ಪೂಜಾರಿ ಇವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.
ಬೆಳಿಗ್ಗೆ 9 ರಿಂದ 1 ಗಂಟೆ ಹಾಗೂ ಮಧ್ಯಾಹ್ನ 4 ರಿಂದ 8 ಗಂಟೆಯವರೆಗೆ ಕಾರ್ಯಕ್ರಮ ನಡೆಯುವುದು. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಸಂಗೀತಾಸಕ್ತರು, ಆಗಮಿಸಲು ಕೋರಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ