Kannada NewsKarnataka NewsLatest

*ಚಿರತೆ ಸೆರೆ ಹಿಡಿದು ಬೈಕ್ ಗೆ ಕಟ್ಟಿ ಅರಣ್ಯ ಇಲಾಖೆಗೆ ತಂದೊಪ್ಪಿಸಿದ!*

ಪ್ರಗತಿವಾಹಿನಿ ಸುದ್ದಿ; ಹಾಸನ: ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿಯಬೇಕೆಂದರೆ ಏನೆಲ್ಲ ಸಾಹಸಗಳನ್ನು ಮಾಡುತ್ತಾರೆ. ಹೀಗಿರುವಾಗ ಇಲ್ಲೊಬ್ಬ ಯುವಕ ಚಿರತೆಯನ್ನು ಸ್ವತ: ಹಿಡಿದು ಅರಣ್ಯ ಇಲಾಖೆಗೆ ತಂದು ಒಪ್ಪಿಸಿದ್ದಾನೆ.

ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಬಾಗಿವಾಳು ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೇಣುಗೋಪಾಲ್ ಎಂಬ ಯುವಕ ತನ್ನ ಜಮೀನಿಗೆ ಬಂದಿದ್ದ ಚಿರತೆಯನ್ನು ಹೇಗೋ ದುಸ್ಸಾಹಸ ಮಾಡಿ ಸೆರೆ ಹಿಡಿದಿದ್ದಾನೆ. ಹೀಗೆ ಚಿರತೆಯನ್ನು ಹಿಡಿದವನೇ ಅದರ ಕೈಕಾಲು ಕಟ್ಟಿ ಬೈಕ್ ಗೆ ಚಿರತೆಯನ್ನು ಕಟ್ಟಿಕೊಂಡು ಅರಣ್ಯ ಇಲಾಖೆಗೆ ತಂದು ಒಪ್ಪಿಸಿದ್ದಾನೆ.

ಚಿರತೆ ಹಿಡಿಯುವ ಸಾಹಸದಲ್ಲಿ ಯುವಕನಿಗೆ ಗಾಯಗಳಾಗಿವೆ. ಯುವಕನ ಸಾಹಸಕ್ಕೆ ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿ ಬೆರಗಾಗಿದ್ದಾರೆ. ಸೆರೆ ಹಿಡಿದ ಚಿರತೆಗೆ ಗಂಡಸಿ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button