Latest

ಗಣೇಶಪುರದಲ್ಲಿ ಮಾಜಿ ಸೈನಿಕರ ಸಂಘ ಉದ್ಘಾಟನೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

 ಬೆಳಗಾವಿ ಗ್ರಾಮೀಣ ಕ್ಷೇತ್ರದ ಗಣೇಶಪುರದ ಲಕ್ಷ್ಮೀ ನಗರದಲ್ಲಿ ಜೈ ಜವಾನ್ ಮಾಜಿ ಸೈನಿಕ ಸಂಘವನ್ನು ಶಾಸಕಿ, ಮೈಸೂರು ಮಿನರಲ್ಸ್ ಚೇರಮನ್ ಲಕ್ಷ್ಮಿ ಹೆಬ್ಬಾಳಕರ್ ಉದ್ಘಾಟಿಸಿದರು.

Home add -Advt

ಈ ಸಂಘಟನೆಯು ದೊಡ್ಡದಾಗಿ ಬೆಳೆಯಲಿ ಎಂದು ಹಾರೈಸಿದ ಅವರು, ದೇಶಕ್ಕಾಗಿ ಸೈನಿಕರ ತ್ಯಾಗ ಬಲಿದಾನ ಅಮರವಾಗಿದ್ದು, ಭಯೋತ್ಪಾದಕರಿಂದ ದೇಶದ ಒಳಿತಿಗಾಗಿ ಗಡಿಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ವೀರಯೋಧರನ್ನು ಸ್ಮರಿಸಿದರು.

ಇತ್ತೀಚಿಗೆ ಕಾಶ್ಮೀರದ ಪುಲ್ವಾಮಾದಲ್ಲಿ ವೀರಮರಣವನ್ನಪ್ಪಿದ ಸೈನಿಕರಿಗ ಶೃದ್ಧಾಂಜಲಿ ಸಲ್ಲಿಸಲಾಯಿತು.

Related Articles

Back to top button