ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ನಗರದ ಬೆಳಗಾವಿ ಶಿಕ್ಷಣ ಸಂಸ್ಥೆಯ ಶ್ರೀಮತಿ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಗೆ ಮಾರವಾಡಿ ಯುವ ಮಂಚ್ ವತಿಯಿಂದ ಬ್ಯಾಟರಿ ಇನ್ವರ್ಟರ್ ದೇಣಿಗೆ ನೀಡಿ ಶಾಲೆಯಲ್ಲಿರುವ ಎಲ್ಲ ಸಿಸಿ ಕ್ಯಾಮರಾಗಳು ಸತತವಾಗಿ ಚಿತ್ರಿಕರಣ ಮಾಡುವಂತೆ ಸೌಲಭ್ಯ ಕಲ್ಪಿಸಲಾಯಿತು.
ಸಮಾರಂಭದಲ್ಲಿ ಮಾತನಾಡಿದ ಯುವ ಮಂಚ್ ಅಧ್ಯಕ್ಷ ಗೋಪಾಲ ಉಪಾಧ್ಯಾಯ, ಸತತ ಪ್ರಯತ್ನ ಹಾಗೂ ಪ್ರಾಮಾಣಿಕತೆಯಿಂದ ದೊರಕಿದ ಫಲ ಶಾಶ್ವತವಾಗಿರುತ್ತದೆ. ಪ್ರತಿಯೊಬ್ಬರು ವಿದ್ಯಾರ್ಥಿ ಜೀವನದಲ್ಲಿಯೇ ಪ್ರಾಮಾಣಿಕತೆ, ಸತತ ಪ್ರಯತ್ನ, ಸ್ವರಕ್ಷಣೆ, ಸ್ವಾವಲಂಬನೆ ಹಾಗೂ ಹಿರಿಯರ ಬಗ್ಗೆ ಗೌರವ ಮುಂತಾದ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು ಉಚ್ಚ ಶಿಕ್ಷಣದ ಗುರಿ ತಲುಪಬೇಕೆಂದು ಹೇಳಿದರು.
ಯುವ ಮಂಚ್ ಮಾಜಿ ಅಧ್ಯಕ್ಷ ಅಜಯ ಹೆಡಾ ಮಾತನಾಡಿ, ಶಿಕ್ಷಣದಿಂದಲೆ ಜೀವನ, ಶಿಕ್ಷಣವೇ ಬಾಳಿನ ಬೆಳಕು. ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಿ ಬಾಳಬೇಕಾದರೆ ಪುಸ್ತಕದ ಜ್ಞಾನದ ಜೊತೆಗೆ ವ್ಯವಹಾರಿಕ ಜ್ಞಾನದ ಜೊತೆಗೆ ವ್ಯವಹಾರಿಕ ಜ್ಞಾನದ ಅವಶ್ಯಕತೆಯೂ ಇದೆ. ಆದ್ದರಿಂದ ಈ ಎರಡು ಜ್ಞಾನಗಳನ್ನು ಪಡೆಯುವುದು ನಮ್ಮ ಜೀವನದ ಗುರಿಯಾಗಬೇಕು ಎಂದು ಕರೆ ನೀಡಿದರು.
ಸಹಕಾರ್ಯದರ್ಶಿ ಜೈ ರಾಠಿ, ಶಾಲಾ ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಸುಧೀರ ಕುಲಕರ್ಣಿ, ಸಂಸ್ಥೆಯ ಸದಸ್ಯ ವೀಜೆಂದ್ರ ಗುಡಿ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕ ಎಂ.ಕೆ. ಮಾದಾರ ಸ್ವಾಗತಿಸಿದರು. ಸರಸ್ವತಿ ದೇಸಾಯಿ ವಂದಿಸಿದರು. ಪ್ರಣಾಲಿ ಶಿಂಗಟೆ ನಿರೂಪಿಸಿದರು.