Latest

ಅಂತೂ ಬಂತು ಕ್ಯಾಂಟೋನ್ಮೆಂಟ್ ಬೋರ್ಡ್ ಗೆ ಎಸ್ಎಫ್ ಸಿ ನಿಧಿ

ಪ್ರಗತಿವಾಹಿನಿ  ಸುದ್ದಿ, ಬೆಳಗಾವಿ:

ರಾಜ್ಯ ಹಣಕಾಸು ಆಯೋಗದಿಂದ ಬೆಳಗಾವಿ ಕ್ಯಾಂಟೋನ್ಮೆಂಟ್ ಬೋರ್ಡ್ ಗೆ 78 ಲಕ್ಷ ರೂ. ಬಿಡುಗಡೆಯಾಗಿದೆ.

ಕ್ಯಾಂಟೋನ್ಮೆಂಟ್ ಬೋರ್ಡನ್ನು ರಾಜ್ಯ ಸರಕಾರ ಸ್ಥಳೀಯ ಸಂಸ್ಥೆಗಳ ಸಾಲಿನಲ್ಲಿ ಪರಿಗಣಿಸಿದೆ. ಆದರೆ ಕಳೆದ ಹಲವು ವರ್ಷಗಳಿಂದ ಎಸ್ ಎಫ್ ಸಿ ನಿಧಿ ನೀಡುವುದನ್ನು ನಿಲ್ಲಿಸಲಾಗಿತ್ತು. ಇದರಿಂದಾಗಿ ಕ್ಯಾಂಟೋನ್ಮೆಂಟ್ ಬೋರ್ಡ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು.

Home add -Advt

ದಿವ್ಯಾ ಹೊಸೂರ್ ಬೆಳಗಾವಿ ಕ್ಯಾಂಟೋನ್ಮೆಂಟ್ ಬೋರ್ಡ್ ಸಿಇಓ ಆಗಿ ಬಂದಾಗಿನಿಂದಲೂ ರಾಜ್ಯ ಸರಕಾರ ಎಸ್ಎಫ್ ಸಿ ನಿಧಿ ಬಿಡುಗಡೆ ಮಾಡಬೇಕೆಂದು ಪ್ರಸ್ತಾವನೆ ಸಲ್ಲಿಸುತ್ತಲೇ ಇದ್ದರು. ಅಲ್ಲದೆ, ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅಂಜುಂ ಫರವೇಜ್ ಮೂಲಕ ನಿರಂತರವಾಗಿ ಒತ್ತಡ ಹೇರುತ್ತ ಬಂದಿದ್ದರು. 

ಇದೀಗ 2018-19ನೇ ಸಾಲಿನ ನಿಧಿಯಾಗಿ 78 ಲಕ್ಷ ರೂ.ಗಳನ್ನು ಮಹಾನಗರ ಪಾಲಿಕೆಯ ಆಯುಕ್ತರ ಖಾತೆ ಬಿಡುಗಡೆ ಮಾಡಲಾಗಿದ್ದು, ಅದನ್ನು ಚೆಕ್ ಮೂಲಕ ಕ್ಯಾಂಟೋನ್ಮೆಂಟ್ ಬೋರ್ಡ್ ಸಿಇಓ ಅವರಿಗೆ ವರ್ಗಾಯಿಸುವಂತೆ ಸೂಚಿಸಲಾಗಿದೆ. ಒಂದೆರಡು ದಿನದಲ್ಲಿ ಹಣ ವರ್ಗಾವಣೆಯಾಗಬಹುದು. 

 

Related Articles

Back to top button