Latest

ಅರಭಾವಿ ತೋಟಗಾರಿಕೆ ಮಹಾವಿದ್ಯಾಲಯಕ್ಕೆ ಉತ್ತಮ ಕೇಂದ್ರ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯವು ಬಾಳೆ ಮತ್ತು ಚಿಕ್ಕು ಹಣ್ಣು ಬೆಳೆ ಕುರಿತು ರಾಷ್ಟ್ರದಲ್ಲೇ ಉತ್ತಮ ಸಂಶೋಧನೆ ಮಾಡಿದ್ದಕ್ಕಾಗಿ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಅಖಿಲ ಭಾರತೀಯ ಸಮನ್ವಯ ಸಂಶೋಧನಾ ಯೋಜನೆ (ಹಣ್ಣುಗಳು) ಸಂಸ್ಥೆಯ ೨೦೧೮-೧೯ನೇ ಸಾಲಿನ ಉತ್ತಮ ಕೇಂದ್ರ ಪ್ರಶಸ್ತಿ ಪಡೆದುಕೊಂಡಿದೆ.
ಅಸ್ಸಾಂನ ರಾಜ್ಯದ ಜೋರ್ಹಾಟ್ ಕೃಷಿ ವಿಶ್ವವಿದ್ಯಾಲಯದಲ್ಲಿ ಫೆ.೧೪ ರಿಂದ ೧೬ ವರೆಗೆ  ಜರುಗಿದ ಭಾಕೃಅಪ-ಅಖಿಲ ಭಾರತೀಯ ಸಮನ್ವಯ ಸಂಶೋಧನಾ ಯೋಜನೆಯ ೬ನೇ ಗುಂಪು ಚರ್ಚೆ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ತೋಟಗಾರಿಕಾ ವಿಜ್ಞಾನ ಸಂಸ್ಥೆಯ ಎಡಿಜಿ ಡಾ. ಡಬ್ಲೂ.ಎಸ್. ಧಿಲ್ಲೋನ್, ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎಂ.ಆರ್. ದಿನೇಶ ಮತ್ತು ಬೆಂಗಳೂರಿನ ಭಾಕೃಅಪ-ಅಖಿಲ ಭಾರತೀಯ ಸಮನ್ವಯ ಸಂಶೋಧನಾ ಯೋಜನೆ (ಹಣ್ಣುಗಳು) ಸಂಯೋಜಕ ಡಾ. ಪ್ರಕಾಶ ಪಾಟೀಲ, ಅರಭಾವಿ ಮಹಾವಿದ್ಯಾಲಯದ ವಿಜ್ಞಾನಿಗಳಾದ ಡಾ. ಕಾಂತರಾಜು ವಿ., ಡಾ. ಎಸ್.ಎನ್. ಪಾಟೀಲ, ಶ್ರೀಮತಿ ಸುಹಾಸಿನಿ ಜಾಲವಾದಿ ಹಾಗೂ ಸಿದ್ದಣ್ಣಾ ಠೋಕೆ ಉಪಸ್ಥಿತರಿದ್ದರು.

Related Articles

Back to top button