Latest

ಕರ್ನಾಟಕ ಕುಸ್ತಿಯಲ್ಲಿ ಹಂಚಿನಾಳ ಕನ್ನಡ ಶಾಲೆ ವಿದ್ಯಾರ್ಥಿನಿಯ ಸಾಧನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ಸರಕಾರದ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆದ ೨೦೧೯ನೇ ಸಾಲಿನ ಕರ್ನಾಟಕ ಕುಸ್ತಿ ಸ್ಪರ್ಧೆಯಲ್ಲಿ ಕೆಎಲ್‌ಇ ಸಂಸ್ಥೆಯ ಬಿ.ಎಸ್. ಹಂಚಿನಾಳ ಕನ್ನಡ ಪ್ರಾಥಮಿಕ ಶಾಲೆಯ ೭ನೇ ತರಗತಿ ವಿದ್ಯಾರ್ಥಿನಿ ಲಕ್ಷ್ಮೀ ಸಂಜಯ ಪಾಟೀಲ, ೧೪ವರ್ಷ ವಯೋಮಾನದ ೪೨ ಕೆ.ಜಿ.ತೂಕದ ಕುಸ್ತಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಜತ ಪದಕದೊಂದಿಗೆ ೧೦ ಸಾವಿರ ರೂ. ನಗದು ಬಹುಮಾನ ಪಡೆದುಕೊಂಡಿದ್ದಾಳೆ. ವಿದ್ಯಾರ್ಥಿನಿಯ ಈ ಸಾಧನೆಗೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹಾಗೂ ಶಾಲೆಯ ಪ್ರಧಾನ ಗುರು ಬಿ.ಕೆ. ಗುರುಪುತ್ರನವರ, ವಿ.ಸಿ. ಗುರನಗೌಡರ, ರಾಜೇಶ್ವರಿ ಬಿ. ಗವಿಮಠ, ಯು.ಬಿ. ದೇಸಾಯಿ, ಬಿ.ಎಸ್.ಗಂಗನಗೌಡರ, ಉಮಾ ಕರ್ಕಿ, ಶ್ರೀದೇವಿ ಪಾಟೀಲ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

Related Articles

Back to top button