Latest

ಪ್ರತಿಭಾವಂತನಿಗೆ ಸಿಎಂ ಸನ್ಮಾನ

Home add -Advt

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಏಪ್ರಿಲ್ 2018 ರಲ್ಲಿ ನಡೆದ ಎಸ್ ಎಸ್ಎಲ್ ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 625 ಅಂಗಳನ್ನು ಗಳಿಸಿದ ಬೆಳಗಾವಿಯ ಸೇಂಟ್ ಕ್ಸೇವಿಯರ್ ಪ್ರೌಢ ಶಾಲೆಯ ವಿದ್ಯಾರ್ಥಿ ಮೊಹಮದ್ ಕೈಫ್ ಮುಲ್ಲಾ ಅವರಿಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಅಭಿನಂದಿಸಿ ಸನ್ಮಾನಿಸಿದರು.
ಮೊದಲ ಭಾಷೆ ಇಂಗ್ಲೀಷ್‌ನಲ್ಲಿ 125 ಅಂಕಗಳಿಗೆ 125, ಎರಡನೇ ಭಾಷೆ ಕನ್ನಡ, ಮೂರನೇ ಭಾಷೆ ಹಿಂದಿ, ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳಲ್ಲಿ 100 ಅಂಕಗಳಿಗೆ 100 ಅಂಕಗಳನ್ನು ಪಡೆದಿದ್ದಾರೆ.
ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ, ಜಾತ್ಯಾತೀತ ಜನತಾ ದಳದ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್, ಮೊಹಮದ್ ಕೈಫ್ ಮುಲ್ಲಾ ಅವರ ತಂದೆ ಹಾರೂನ್ ರಷೀದ್ ಮತ್ತು ತಾಯಿ ಪರ್ವೀನ್ ಅವರೂ ಇದ್ದರು.

Related Articles

Back to top button