Latest

ಬಹಿರಂಗ ಕ್ಷಮೆ ಕೇಳದಿದ್ದರೆ ಮಾನಹಾನಿ ಖಟ್ಲೆ -ಸತೀಶ್ ಎಚ್ಚರಿಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಕಡೋಲಿಯಲ್ಲಿ ನಡೆದ ಚುನಾವಣಾ ಪ್ರಚಾರ ಭಾಷಣದ ಸಂದರ್ಭದಲ್ಲಿ ” ಬ್ರಾಹ್ಮಣ ” ಪದವನ್ನು ತಾವು ಬಳಸದೇ ಇದ್ದರೂ, ಆ ಶಬ್ದ ಬಳಸಿ ಅವಹೇಳನ ಮಾಡಲಾಗಿದೆ ಎಂದು ಚುನಾವಣಾ ಆಯೋಗಕ್ಕೆ ಸುಳ್ಳು ದೂರು ನೀಡಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್. ವೆಂಕಟನಾರಾಯಣ 24 ಗಂಟೆಯೊಳಗೆ ಬಹಿರಂಗ ಕ್ಷಮೆ ಕೇಳಬೇಕು ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಆಗ್ರಹಿಸಿದ್ದಾರೆ.

IMG

ವೆಂಕಟನಾರಾಯಣ ಅವರು ನೀಡಿದ್ದ ದೂರಿನ ಅನ್ವಯ ಸತ್ಯಾಸತ್ಯತೆ ಪರಿಶೀಲಿಸಿರುವ ಚುನಾವಣಾ ಆಯೋಗವು ಸಚಿವರು ತಮ್ಮ ಭಾಷಣದಲ್ಲಿ ಎಲ್ಲಿಯೂ ” ಬ್ರಾಹ್ಮಣ ” ಪದವನ್ನು ಬಳಸಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ ಎಂದು ಸತೀಶ್ ಹೇಳಿದ್ದಾರೆ.

Home add -Advt

 

Related Articles

Back to top button