ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕಳೆದ ವಿಧಾನ ಸಭಾ ಚುನಾವಣೆ ವೇಳೆ ಯಶಸ್ವಿಯಾಗಿ ಅಭಿಯಾನ ನಡೆಸಿದ್ದ ಬೆಳಗಾವಿಯ ಸಿಟಿಜನ್ ಫೋರಂ ಈ ಬಾರಿ ಲೋಕಸಭಾ ಚುನಾವಣೆಗೂ ಬೆಳಗಾವಿ ಓಟ್ಸ್ 100% ಅಭಿಯಾನ ಹಮ್ಮಿಕೊಂಡಿದೆ.
ಕಚೇರಿ ಆವರಣದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಳ್ಳಿ ಹಾಗೂ ಸ್ವೀಪ್ ಕಮಿಟಿಯ ಚೇರಮನ್ ಆಗಿರುವ ಜಿಲ್ಲಾ ಪಂಚಾಯತ ಸಿಇಒ ಕೆ.ವಿ.ರಾಜೇಂದ್ರ ಅಭಿಯಾನಕ್ಕೆ ಚಾಲನೆ ನೀಡಿದರು.
ಸಿಟಿಜನ್ ಫೋರಂ ನ ಚೈತನ್ಯ ಕುಲಕರ್ಣಿ, ಸಚಿನ್ ಸಬ್ನಿಸ್, ಕಿರಣ್ ಅಗಡಿ, ಕಿರಣ ನಿಪ್ಪಾಣಿಕರ್ ಮೊದಲಾದವರಿದ್ದರು.
ಅಭಿಯಾನದ ಸ್ಟಿಕ್ಕರ್ ಬಿಡುಗಡೆ ಮಾಡಲಾಯಿತು.