ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಕೆಲಸ ನಿರ್ವಹಿಸುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ಮಣ್ಣು ಕುಸಿದು ಮೂವರು ಸಾವನ್ನಪ್ಪಿದರು.
ಬೆಳಗಾವಿ ತಾಲೂಕಿನ ದೇಸೂರು ಬಳಿ ಈ ಘಟನೆ ನಡೆದಿದೆ.
ಸೇತುವೆ ನಿರ್ಮಿಸಲು ಹಾಕಿದ್ದ ಮಣ್ಣಿನ ದಿಬ್ಬ ಏಕಾಏಕಿ ಕುಸಿದದ್ದರಿಂದ ಅದರ ಕೆಳಗೆ ಸಿಲುಕಿ ಮೂವರು ಅಸುನೀಗಿದ್ದಾರೆ.
ಜಾರ್ಖಂಡ ಮೂಲದ ಸುಖಾನ್, ದುರ್ಗೇಶ & ಅರ್ಜುನ ಎಂದು ಗುರುತಿಸಲಾಗಿದೆ.
ಮಣ್ಣಲ್ಲಿ ಹುದುಗಿದ ಶವಗಳನ್ನು ಹೊರತೆಗೆಯುವ ಯತ್ನ ನಡೆದಿದೆ. ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.