Latest

ರಮೇಶ ಕಾಂಗ್ರೆಸ್ ಬಿಡಲು ನಿರ್ಧಸಿದ್ದಾರೆ, ಹಣ ಪಡೆದಿಲ್ಲ -ಬಾಲಚಂದ್ರ

ಪ್ರಗತಿವಾಹಿನಿ ಸುದ್ದಿ, ಗೋಕಾಕ:
ರಮೇಶ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಿಂದ ಒಂದು ಹೆಜ್ಜೆ ಹೊರಗೆ ಇಟ್ಟಿದ್ದಾರೆ. ಅವರು ಯಾರ ಬಳಿಯೂ ಹಣ ಪಡೆದಿಲ್ಲ ಎಂದು ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. 
ಗೋಕಾಕದಲ್ಲಿ ಮಾತನಾಡಿದ  ಬಾಲಚಂದ್ರ ಜಾರಕಿಹೊಳಿ, ಬೇರೆ ಬೇರೆ ಕಾರಣದಿಂದ ಕಾಂಗ್ರೆಸ್ ಬಿಡಲು ರಮೇಶ ನಿರ್ಧಿಸಿದ್ದಾರೆ. ಲೋಕಸಭೆ ‌ಚುನಾವಣೆ ಮುಗಿದ ಬಳಿಕ ಬಹಳ ಬದಲಾವಣೆ ಅಗಲಿದೆ ಎಂದಿದ್ದಾರೆ. 
ಕುಟುಂಬ‌ ವಿಚಾರ ಬಂದಾಗ ನಾವೆಲ್ಲ ಒಂದೇ. ರಾಜಕೀಯ ಬಂದಾಗ ನಿರ್ಧಾರ ಬೇರೆ ಬೇರೆ.
ಕುಟುಂಬ ವಿಚಾರ ಬಂದಾಗ ಎಲ್ಲರು ಕುಳಿತ ಮಾತನಾಡೋದು ಒಳ್ಳೆಯದು. ವಿವಾದ ಇತ್ಯರ್ಥ ಮಾಡೋಕೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದಿದ್ದಾರೆ.
 ರಮೇಶ, ಸತೀಶ ನನಗಿಂತ  ದೊಡ್ಡವರು. ಇಬ್ಬರು ಸಮಸ್ಯೆಯನ್ನು ಕುಳಿತು ಮಾತಾಡಿ ಇತ್ಯರ್ಥ ಪಡಿಸಿಕೊಳ್ಳಬೇಕು. ಇಬ್ಬರು ಒಂದಾದ್ರೆ ರಾಜ್ಯದಲ್ಲಿ ಉತ್ತಮ ರಾಜಕೀಯ ಶಕ್ತಿಯಾಗಲಿದ್ದಾರೆ ಎಂದರು.
 

Related Articles

Back to top button