
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕನ್ನಡ ಮಹಿಳಾ ಸಂಘ – ಸಾಹಿತ್ಯ ಕಲಾ ವೇದಿಕೆ ವತಿಯಿಂದ ರಾಜ್ಯ ಮಟ್ಟದ ಕನ್ನಡ ಗೀತೆಗಳ ಸ್ಪರ್ಧೆ ‘ರಾಗ ರಂಜನಿ’ ಆಯೋಜಿಸಲಾಗಿತ್ತು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಸಾಹಿತಿಗಳಾದ ಡಾ.ಸರಜೂ ಕಾಟ್ಕರ ಹಾಗೂ ರಾಮಕೃಷ್ಣ ಮರಾಠೆ ಅತಿಥಿಗಳಾಗಿ ಆಗಮಿಸಿದ್ದರು. ಸಂಘದ ಅಧ್ಯಕ್ಷೆ ರಂಜನಾ ನಾಯಕ, ಕಾರ್ಯದರ್ಶಿ ರಾಜಶ್ರೀ ಕೆಂಭಾವಿ ಹಾಗೂ ಚೇರಮನ್ ರೋಹಿಣಿ ಕುಲಕರ್ಣಿ ವೇದಿಕೆಯಲ್ಲಿ ಇದ್ದರು.
ಉಷಾ ನಾಯಕ ಹಾಗೂ ಶೀಲಾ ದೇಶಪಾಂಡೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ರಾಗ ರಂಜನಿ ಕಾರ್ಯಕ್ರಮದಲ್ಲಿ ಸುಮಾರು 30 ಸ್ಪರ್ಧಿಗಳು ಭಾಗವಹಿಸಿದ್ದರು. ಸಂಜೆ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮಹಿಳಾ ವಿಭಾಗದಲ್ಲಿ ಶೃತಿ ಸಾತಬಾಯಿ, ಲಕ್ಷ್ಮಿ ದೇಶಪಾಂಡೆ, ಅಕ್ಷತಾ ಬಣ್ಣದಬಾವಿ, ಅನಿತಾ ಶೆಟ್ಟಿ, ಸೌಂದರ್ಯ ಪದರೆ, ಸುಜಾತಿ ಸಣ್ಣಕ್ಕಿ ಬಹುಮಾನಗಳನ್ನು ಪಡೆದರು. ಪುರು,ರ ವಿಭಾಗದಲ್ಲಿ ಓಂಕಾರ ದೇಶನೂರು, ಸಂಜೀವ ಮುಧೋಳ, ಗುರುರಾಜ ಮನಗೂಳಿ, ಆರ್.ಎಸ್.ಕುರಡವಾಡ ಬಹುಮಾನ ಪಡೆದರು.
ನಿರ್ಮಲಾ ಪ್ರಕಾಶ ಹಾಗೂ ವಿಶಾಖಾ ದೇಶಪಾಂಡೆ ನಿರ್ಣಾಯಕರಾಗಿ ಆಗಮಿಸಿದ್ದರು. ಆಶಾ ಯಮಕನಮರಡಿ ಕಾರ್ಯಕ್ರಮ ನಿರೂಪಿಸಿದರು.
