
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಪಾವನಭೂಮಿ ಹಲಗಾ ಗ್ರಾಮದ ಶ್ರೀ ಮರಗಾಯಿ ದೇವಿ ಮಂದಿರ ನಿರ್ಮಾಣದ ಪೂಜಾ ಕಾರ್ಯಕ್ರಮವನ್ನು ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ನೆರವೇರಿಸಿದರು.

ಮುತ್ನಾಳ ಕೇದಾರ ಪೀಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಮರಗಾಯಿ ದೇವಿ ಸೇವಾ ಕಮೀಟಿಯವರು, ಗ್ರಾಮದ ಹಿರಿಯರು, ಗಣೇಶೋತ್ಸವ ಮಂಡಳ, ಯುವಕ ಮಂಡಳ, ಭಗಿನಿ ಮಂಡಳ, ಮಹಿಳಾ ಮಂಡಳ ಹಾಗೂ ಇತರ ಭಕ್ತ ಮಂಡಳದ ಜನರು ಉಪಸ್ಥಿತರಿದ್ದರು.