*ಕೇವಲ ಅಕ್ಷರ ಕಲಿಯುವುದಷ್ಟೇ ಶಿಕ್ಷಣವಲ್ಲ; ಸನಾತನ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವುದೇ ಜೊಲ್ಲೆ ಎಜುಕೇಶನ್ ಸೊಸೈಟಿಯ ಶಾಲೆಯ ಮೂಲ ಉದ್ದೇಶ: ಶಾಸಕಿ ಶಶಿಕಲಾ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ: ಬುಧವಾರ ನಿಪ್ಪಾಣಿಯ ಶ್ರೀ ಶಿವಶಂಕರ ಜೊಲ್ಲೆ ಆಂಗ್ಲ ಮಾಧ್ಯಮ ಶಾಲೆ ನಿಪ್ಪಾಣಿ ನಾಂಗನೂರ ಶಾಲೆಯಲ್ಲಿ “ತಂದೆ-ತಾಯಿಯೇ ಪ್ರತ್ಯಕ್ಷ ದೇವರು” ಎಂಬ ನಂಬಿಕೆಗೆ ಸಾಕ್ಷಿಯಾಯಿತು.ಗುರು ಪೂರ್ಣಿಮಾ ಆಚರಣೆ ನಿಮಿತ್ಯ ವಿದ್ಯಾದೇವಿ ಸರಸ್ವತಿ ಮಾತೆ ಹಾಗೂ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಮಾಜಿ ಸಚಿವರು ಹಾಗೂ ನಿಪ್ಪಾಣಿ ಶಾಸಕರಾದ ಶಶಿಕಲಾ ಜೊಲ್ಲೆ,ಯವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.ಈ ಶುಭ ಸಂದರ್ಭದಲ್ಲಿ ನಮ್ಮ ಪ್ರೀತಿಯ ಸುಪುತ್ರ ಜ್ಯೋತಿಪ್ರಸಾದ ಮತ್ತು ಸೊಸೆ ಪ್ರಿಯಾ ಅವರು ಶಶಿಕಲಾ ಜೊಲ್ಲೆ ಯವರು ಪಾದಪೂಜೆ ಮಾಡಿದರು.

ಶಶಿಕಲಾ ಜೊಲ್ಲೆ ಮಾತನಾಡಿ ಚಿಕ್ಕನಿಂದಲೇ ಉತ್ತಮ ಗೌರವ ಸಂಸ್ಕಾರ ನೀಡುವ ಉದ್ದೇಶದಿಂದ ವಿಧ್ಯಾರ್ಥಿಗಳು ನಮ್ಮ ಶಾಲೆಯಲ್ಲಿ ತಮ್ಮ ತಂದೆ-ತಾಯಿಯರ ಭಕ್ತಿ ಭಾವದಿಂದ ಪಾದಪೂಜೆ ಮಾಡಿ ಆಶೀರ್ವಾದ ಪಡೆದ ಕ್ಷಣಗಳು ಪ್ರತಿಯೊಬ್ಬರ ಕಣ್ಣಂಚಲ್ಲಿ ಆನಂದಬಾಷ್ಪ ತರಿಸಿದವು. “ಇಂಗ್ಲಿಷ್ ಮಾಧ್ಯಮ ಶಿಕ್ಷಣ ಅಗತ್ಯವಾಗಿದ್ದರೂ, ನಮ್ಮ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಎಂದಿಗೂ ಮರೆಯಬಾರದು. ಮಕ್ಕಳಲ್ಲಿ ಭಾರತೀಯ ಸಂಸ್ಕಾರಗಳನ್ನು ಬೆಳೆಸುವ ಜವಾಬ್ದಾರಿ ಪೋಷಕರ ಮೇಲಿದೆ” ಎಂದು ತಿಳಿಸಿದರು.
ಈ ಸಮಾರಂಭದಲ್ಲಿ ಜ್ಯೋತಿಪ್ರಸಾದ ಜೊಲ್ಲೆ, ಬಸವಪ್ರಸಾದ ಜೊಲ್ಲೆ ಪ್ರಿಯಾ ಜೊಲ್ಲೆ ಪ್ರಾಂಶುಪಾಲರಾದ ಊರ್ಮಿಳಾ ಚೌಗಲೆ, ಶಿಕ್ಷಕರು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.




