ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಹುತಾತ್ಮ ಯೋಧ ಮಂಡ್ಯದ ಗುರು ಕುಟುಂಬಕ್ಕೆ ತಮ್ಮ ಒಂದು ತಿಂಗಳ ಗೌರವ ಧನ ನೀಡಲು ಬೆಳಗಾವಿಯ ಜಿಲ್ಲಾಪಂಚಾಯಿತಿ ಸದಸ್ಯರು ನಿರ್ಧರಿಸಿದ್ದಾರೆ.
ಸೋಮವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರೊಬ್ಬರ ಪ್ರಸ್ತಾಪಕ್ಕೆ ಎಲ್ಲ ಸದಸ್ಯರೂ ಒಪ್ಪಿಗೆ ಸೂಚಿಸಿದರು.
ತಲಾ 5 ಸಾವಿರ ರೂ.ಗಳಂತೆ 90 ಸದಸ್ಯರ ಗೌರವಧನವನ್ನು ಯೋಧರ ಕುಟುಂಬಕ್ಕೆ ಕಳಿಸಲಾಗುವುದು.