Kannada NewsKarnataka NewsLatest

ಪ್ರಧಾನಿ ನಿಧಿಗೆ ಕೋಟಿ ರೂ. ನೀಡಿದ ಬಿ.ಟಿ.ಪಾಟೀಲ ಪರಿವಾರ

 ಪ್ರಗತಿವಾಹಿನಿ ಸುದ್ದಿ,  ಬೆಳಗಾವಿ-  ಬೆಳಗಾವಿಯ ಪ್ಯಾಟ್ಸನ್ ಗ್ರೂಪ್ ನ ಬಾಳಾಸಾಹೇಬ್ ಪಾಟೀಲ್ (ಬಿ.ಟಿ. ಪಾಟೀಲ) ಒಂದು ಕೋಟಿ ರೂ ಅನುದಾನವನ್ನು ಪ್ರಧಾನಂತ್ರಿಗಳ ಕೊರೋನಾ ಪರಿಹಾರ ನಿಧಿಗೆ ನೀಡಿದ್ದಾರೆ.
 ದೇಶ ಗಂಡಾಂತರದಲ್ಲಿದೆ, ಜನ ಕಷ್ಟದಲ್ಲಿದ್ದಾರೆ, ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವೇ ಎಲ್ಲವನ್ನು ನಿಭಾಯಿಸಲು ಸಾಧ್ಯವಿಲ್ಲ, ಎಲ್ಲರಿಗೂ ಸಾಮಾಜಿಕ ಜವಾಬ್ದಾರಿ ಇದೆ, ಇದನ್ನು ಮನಗೊಂಡು ನಾನು ಪ್ರಧಾನ ಮಂತ್ರಿಗಳ ಕೊರೋನಾ ಪರಿಹಾರ ನಿಧಿಗೆ ಒಂದು ಕೋಟಿ ರೂ ಕೊಟ್ಟಿದ್ದೇನೆ, ಇಂತಹ ಕಷ್ಟದ ಕಾಲದಲ್ಲಿ ಯಾರಿಗೆ ಆರ್ಥಿಕ ಸಹಾಯ ಮಾಡುವ ಸಾಮರ್ಥ್ಯ ಇದೆಯೋ ಅವರೆಲ್ಲರು ಪುಣ್ಯದ ಸೇವೆಯಲ್ಲಿ ಕೈ ಜೋಡಿಸಬೇಕು‌ ಎಂದು ಬಾಳಾಸಾಹೇಬ ಪಾಟೀಲ ಹೇಳಿದ್ದಾರೆ.
ಬಾಳಸಾಹೇಬ ಪಾಟೀಲರ ಈ ಮಹತ್ಕಾರ್ಯಕ್ಕೆ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.
ಬಿಟಿ ಪಾಟೀಲ ಅವರು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲರ ಚಿಕ್ಕಪ್ಪ. ಒಂದು ಕೋಟಿ ರೂ ಗಳ ಚೆಕ್ ನ್ನು ಅಭಯ ಪಾಟೀಲರ ಮುಖಾಂತರ, ಪ್ರಧಾನ ಮಂತ್ರಿಗಳ ಕೊರೋನಾ ಪರಿಹಾರ ನಿಧಿಗೆ ನೀಡಿದ್ದಾರೆ.

Related Articles

Back to top button