
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗುರುದೇವ ರಾನಡೆ ಮಂದಿರ ಹಿಂದವಾಡಿ ಹತ್ತಿರ ಸರಬರಾಜಾಗುವ 450 ಎಂ.ಎಂ ಪಿ.ಎಸ್ಸಿ ಪೈಪಲೈನ್ನಲ್ಲಿ ಸೋರಿಕೆಯಾಗಿರವುದರಿಂದ ದಿನಾಂಕ 5.8.2024 ರಂದು ತುರ್ತು ದುರಸ್ಥಿ ಕೈಗೊಳ್ಳುವುದರಿಂದ ದಿನಾಂಕ 5-8-2024ರಿಂದ 7-8-2024 ರವರೆಗೆ ಬೆಳಗಾವಿ ನಗರದ ದಕ್ಷಿಣ ಭಾಗಕ್ಕೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದೆ.
ಬೆಳಗಾವಿ ನಗರಕ್ಕೆ ಸರಬರಾಜಾಗುವ ನೀರಿನ ಕೊಳವೆಯಲ್ಲಿ ಗುರುದೇವ ರಾನಡೆ ಮಂದಿರ ಹಿಂದವಾಡಿ ಸೋರಿಕೆವುಂಟಾಗಿರುವುದರಿಂದ ತುರ್ತಾಗಿ ದಿ.5-8-2024 ರಂದು ದುರಸ್ಥಿ ಕಾರ್ಯ ಕೈಗೊಳ್ಳುವ ಹಿನ್ನಲೆಯಲ್ಲಿ ಬೆಳಗಾವಿ ದಕ್ಷಿಣ ಭಾಗದ 24X7 ಪ್ರಾತ್ಯಕ್ಷಿಕ ವಲಯ ಸೇರಿ ನಗರದ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 5-8-2024 ರಿಂದ 7-8-2024 ರವರೆಗೆ ನೀರು ಸರಬರಾಜು ಮಾಡುವಲ್ಲಿ (ಸರದಿಯಲ್ಲಿ) ಷೆಡ್ಯೂಲ್ನಲ್ಲಿ ವ್ಯತ್ಯಯ ಉಂಟಾಗುವುದು.
ಸರಬರಾಜು ವ್ಯತ್ಯಯ ಉಂಟಾಗುವ ದಕ್ಷಿಣ ಪ್ರದೇಶಗಳು: ಆರ್.ಸಿ.ನಗರ ಮೊದಲನೇ & ಎರಡನೇ ಹಂತ, ಹಿಂದವಾಡಿ, ನಾನಾವಾಡಿ, ಟಿಲಕವಾಡಿ, ಶಾಸ್ತ್ರಿ ನಗರ, ಸಮರ್ಥ ನಗರ, ವಡಗಾವಿ, ಶಹಾಪೂರ, ಕಪಿಲೇಶ್ವರ ನಗರ, ಮಜಗಾಂವ, ರಾಜಾರಾಮನಗರ, ಭಾರತ ನಗರ, ಹಳೆ ಬೆಳಗಾವಿ, ಚಿದಂಬರನಗರ ಹಾಗೂ ದಕ್ಷಿಣ ಪ್ರಾತ್ಯಕ್ಷಿಕ ವಲಯ.