Latest

ಇದು ಅನ್ನದಾತನ ಹೋರಾಟಕ್ಕೆ ಸಿಕ್ಕ ಜಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೇಂದ್ರ ಸರ್ಕಾರ 3 ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆದಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೇಶದ ರೈತರಿಗೆ ಧನ್ಯವಾದ ತಿಳಿಸಿದ್ದಾರೆ.

ಇದು ಅನ್ನದಾತನ ಹೋರಾಟಕ್ಕೆ ಸಿಕ್ಕ ಜಯ. ಎಲ್ಲಾ ನಾಯಕರು ಪಕ್ಷ ಬೇಧ ಮರೆತು ಹೋರಾಡಿದ್ದರು. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇದೀಗ ಪ್ರಧಾನಿ ಮೋದಿ ಕೃಷಿ ಕಾಯ್ದೆ ವಾಪಸ್ ಪಡೆಯುವುದಾಗಿ ಘೋಷಿಸಿದ್ದಾರೆ. ಮತದಾರ ಎಷ್ಟು ಸ್ಟ್ರಾಂಗ್ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದಿದ್ದಾರೆ.

ಕಳೆದ ಒಂದು ವರ್ಷದಿಂದ ರೈತರು ಕೃಷಿ ಕಾಯ್ದೆ ವಿರುದ್ಧ ಯಾವೆಲ್ಲ ರೀತಿ ಹೋರಾಟ ನಡೆಸಿದರು. ಇಡೀ ದೇಶದ ಇತಿಹಾಸದಲ್ಲೇ ಇಂತಹ ದೊಡ್ಡ ಮಟ್ಟದಲ್ಲಿ ರೈತರ ಹೋರಾಟ ನಡೆದಿರಲಿಲ್ಲ. ಮನೆ ಮಠ ಎಲ್ಲವನ್ನು ತೊರೆದು ಹಗಲು-ರಾತ್ರಿ ರೈತರು ಹೋರಾಟ ನಡೆಸಿದ್ದರು. ರೈತರ ತ್ಯಾಗ, ಬಲಿದಾನದ ಫಲವಾಗಿ ಇಂದು ಕೇಂದ್ರ ಸರ್ಕಾರ ಕಾಯ್ದೆ ವಾಪಸ್ ಪಡೆದಿದೆ.

ಅನ್ನದಾತನ ಹೋರಾಟದಿಂದ ಪ್ರಧಾನಿ ಮೋದಿತವರಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಗಿತ್ತು. ಈಗ ಚುನಾವಣೆಗಳು ಎದುರಾಗುತ್ತಿರುವ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ಸರ್ಕಾರ ಕಾಯ್ದೆಯನ್ನು ವಾಪಸ್ ಪಡೆದಿದೆ ಎಂದರು.
3 ಕೃಷಿ ತಿದ್ದುಪಡಿ ಕಾಯ್ದೆ ವಾಪಸ್

Home add -Advt

Related Articles

Back to top button