Kannada NewsKarnataka NewsLatest

3ನೇ ರೈಲ್ವೆ ಗೇಟ್ ಕಾಮಗಾರಿ : ಗುತ್ತಿಗೆದಾರನಿಗೆ 20 ಲಕ್ಷ ರೂ. ದಂಡ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಉದ್ಘಾಟನೆಯ ಮರುದಿನವೇ ದುರಸ್ತಿ ಕಾಮಗಾರಿ ನಡೆಯುವಂತಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಬೆಳಗಾವಿ 3ನೇ ರೈಲ್ವೆ ಗೇಟ್ ಕಾಮಗಾರಿ ಗುತ್ತಿಗೆದಾರನಿಗೆ 20 ಲಕ್ಷ ರೂ. ದಂಡ ವಿಧಿಸಲಾಗಿದೆ.

ರೈಲ್ವೆ ಕಾಮಗಾರಿ ಕಳಪೆಯಾದ ಹಿನ್ನೆಲೆಯಲ್ಲಿ ಮುಖ್ಯ ಎಂಜಿನಿಯರ್ ತನಿಖೆ ನಡೆಸಿದ್ದರು. ರೈಲ್ವೆ ಓವರ್ ಬ್ರಿಜ್ ವಾಹನ ಸಂಚಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಅಪ್ರೋಟ್ ರಸ್ತೆ ಮತ್ತು ಗ್ರಿಡರ್ ಭಾರಿ ಮಳೆಯಿಂದಾಗಿ ಹಾಳಾಗಿದೆ. ಅವುಗಳನ್ನು ತಕ್ಷಣ ದುರಸ್ತಿಗೊಳಿಸಲಾಗಿದೆ. ಡಾಂಬರಿಕರಣದಲ್ಲಿ ಗುತ್ತಿಗೆದಾರನ ನಿರ್ಲಕ್ಷ್ಯಕ್ಕಾಗಿ 20 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ರೈಲ್ವೆ ಮೇಲ್ಸೆತುವೆ ಉದ್ಘಾಟನೆಯಲ್ಲಿ ಪ್ರೋಟೋಕಾಲ್ ಉಲ್ಲಂಘನೆ?

3ನೇ ರೈಲ್ವೆ ಗೇಟ್ ಮೇಲ್ಸೇತುವೆ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button