Kannada NewsKarnataka NewsLatest

ಸಿಎಂ ಪರಿಹಾರ ನಿಧಿಗೆ 6.5 ಲಕ್ಷ ರೂ.

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಬೆಳಗಾವಿಯ ರುದ್ರಾಕ್ಷಿ ಮಠದ ಶ್ರೀ ಸಿದ್ಧರಾಮೇಶ್ವರ ಎಜ್ಯುಕೇಶನ್ ಟ್ರಸ್ಟ ಇಂದು  ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿರುವ ರಾಜ್ಯ ಸರಕಾರಕ್ಕೆ ಐದು ಲಕ್ಷ ರೂ.ದೇಣಿಗೆಯನ್ನು ನೀಡಿದೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಐದು ಲಕ್ಷ ರೂ.ಗಳನ್ನು ಮತ್ತು ಎಸ್.ಜಿ.ಬಾಳೇಕುಂದ್ರಿ ಟ್ರಸ್ಟದಿಂದ 1.5 ಲಕ್ಷ ರೂ.ಗಳ ಚೆಕ್ ಗಳನ್ನು ನಾಗನೂರು ಶ್ರೀ ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು
ಮಹಾಸ್ವಾಮಿಗಳು ಬುಧವಾರ ಸಂಜೆ ಬೆಳಗಾವಿಯ ಜಿಲ್ಲಾಧಿಕಾರಿ  ಎಸ್.ಬಿ.ಬೊಮ್ಮನಹಳ್ಳಿ ಅವರಿಗೆ ಸಲ್ಲಿಸಿದರು.
 ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ  ಅಶೋಕ ಚಂದರಗಿ, ಹರೀಶ ಕರಿಗೊಣ್ಣವರ, ಆನಂದ ಲೋಬೊ ಹಾಗೂ ರಾಜೇಂದ್ರ ದೇಸಾಯಿ
ಉಪಸ್ಥಿತರಿದ್ದರು.

Related Articles

Back to top button