Latest

ಆತ್ಮಹತ್ಯೆಗೆ ಯತ್ನಿಸಿದ ತಾಯಿ, ಮೂವರು ಮಕ್ಕಳ ರಕ್ಷಣೆ

ಪ್ರಗತಿವಾಹಿನಿ ಸುದ್ದಿ, ನಾಗರಮುನ್ನೋಳಿ

ಗೋಕಾಕ ಜಲಪಾತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ತೆರಳಿದ್ದ ಮಹಿಳೆ ಮತ್ತು ಮೂರು ಮಕ್ಕಳನ್ನು ರಕ್ಷಿಸಲಾಗಿದೆ.

ನಾಗರ ಮುನ್ನೋಳಿ ಗ್ರಾಮದ ಮಹಿಳೆ ತನ್ನ ಮೂರು ಮಕ್ಕಳು (ಒಂದು ಗಂಡು ಎರಡು ಹೆಣ್ಣು) ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳ.

ಈ ಸಂಧರ್ಭದಲ್ಲಿ ದೂಪದಾಳ ಗ್ರಾಮದ ಯುವಕರಾದ ರಮೇಶ್ ಗಾಡಿವಡ್ಡರ ಮತ್ತು ಪರಶುರಾಮ ಗಾಡಿವಡ್ಡರ ಅವರನ್ನು ರಕ್ಷಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಜೊತೆ ಸೇರಿ ಅವರನ್ನು ಘಟಪ್ರಭಾ ಪೋಲಿಸ್ ಠಾಣೆಗೆ ಕರೆತಂದರು.

Home add -Advt

ಆನಂತರ ಅವರ ಸಂಬಂಧಿಕರಿಗೆ ಅವರನ್ನು ಒಪ್ಪಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ವಿಠ್ಠಲ ಗಾಡಿವಡ್ಡರ, ಕರ್ನಾಟಕ ರಕ್ಷಣಾ ವೇದಿಕೆಯ ರೆಹಮಾನ್ ಮೊಕಾಶಿ, ಅಜಿತ್ ಮಲ್ಲಾಪೂರ,ಅಮೀರ್ ಖಾನ್, ಜಗದಾಳ ರವಿ ನಾವಿ, ವಸಂತ ನಾಯಿಕ ಉಪಸ್ಥಿತರಿದ್ದರು.

Related Articles

Back to top button