Karnataka NewsLatest

 ಶಾಖಾ ಸಲಹಾ ಸಮಿತಿ ಸದಸ್ಯರ ಅವಲಂಬಿತರಿಗೆ ವಿಮಾ ನೆರವು ನೀಡಿದ ಸಂಸದ ಅಣ್ಣಾಸಾಹೇಬ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಕರ್ನಾಟಕದ ಪ್ರತಿಷ್ಠಿತ ಜೊಲ್ಲೆ ಗ್ರೂಪ್ ನ ಅಂಗ ಸಂಸ್ಥೆ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ, ಯಕ್ಸಂಬಾ (ಮಲ್ಟಿ-ಸ್ಟೇಟ್) ವಿಜಯಪುರ ಶಾಖೆ  ಸಲಹಾ ಸಮಿತಿ ಸದಸ್ಯರಾಗಿ ಕಳೆದ 16 ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ದಿ. ವಿಜಯಕುಮಾರ ಸಂಗಪ್ಪಾ ಶೇಕದಾರ ಅವರು ಅಕಾಲಿಕ ನಿಧನ ಹೊಂದಿದ ಹಿನ್ನೆಲೆಯಲ್ಲಿ ಜೊಲ್ಲೆ ಗ್ರೂಪ್ ನ ಸಂಸ್ಥಾಪಕ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಶೇಕದಾರ ಕುಟುಂಬದವರಿಗೆ ಸಾಂತ್ವನ ಹೇಳಿ ಅವರ ವಾರಸುದಾರರಾದ ರೇಣುಕಾ ವಿಜಯಕುಮಾರ ಶೇಕದಾರ ಅವರಿಗೆ ಸಂಸ್ಥೆ ವತಿಯಿಂದ ಮಾಡಿರುವ ವಿಮೆಯ 10 ಲಕ್ಷ ರೂ. ಚೆಕ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಣ್ಣಾಸಾಹೇಬ ಜೊಲ್ಲೆ, “ಸದಸ್ಯರಿಗೆ ಮತ್ತು ಶಾಖಾ ಸಲಹಾ ಸಮಿತಿ ಸದಸ್ಯರಿಗೆ ನೆರವಾಗುವ ಉದ್ದೇಶದಿಂದ ವಿಮೆ ಪರಿಹಾರ ಯೋಜನೆ ಜಾರಿಗೆ ತಂದಿದ್ದೇವೆ. ಶಾಖಾ ಸಲಹಾ ಸಮಿತಿ ನಿರ್ದೇಶಕರಾಗಿ  ವಿಜಯಕುಮಾರ ಸಂಗಪ್ಪಾ ಶೇಕದಾರ ಸಾಕಷ್ಟು ಶ್ರಮ ವಹಿಸಿದ್ದಾರೆ. ಸಂಸ್ಥೆಯ ಬೆಳವಣಿಗೆಯಲ್ಲಿ ಸಾಕಷ್ಟು ಸಲಹೆ ಸೂಚನೆ ನೀಡಿದ್ದರು. ಅವರನ್ನು ಕಳೆದುಕೊಂಡು ನಮಗೆ ದುಖದ ಸಂಗತಿ. ನಮ್ಮ ಸಂಸ್ಥೆಯ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಯಾವುದೇ ಸದಸ್ಯರು ಅಕಾಲಿಕ ನಿಧನರಾದರೆ 10 ಲಕ್ಷ ರೂ. ಅವರ ಅವಲಂಬಿತ ಕುಟುಂಬದವರಿಗೆ ನೀಡಲಾಗುತ್ತದೆ” ಎಂದರು.

ಈ ಸಂದರ್ಭದಲ್ಲಿ ಶಾಖೆಯ ಸಲಹಾ ಸಮಿತಿ ಸದಸ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಮೆರವಣಿಗೆಯಲ್ಲಿ ನಾಡು ನುಡಿ, ಪರಂಪರೆ ಬಿಂಬಿಸುವ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಆಹ್ವಾನ

Home add -Advt

Related Articles

Back to top button