Latest

*ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ಬಸ್ ಅಪಘಾತ*

ಪ್ರಗತಿವಾಹಿನಿ ಸುದ್ದಿ; ವಿಜಯನಗರ: ಶೈಕ್ಷಣಿಕ ಪ್ರವಾಸದ ನಿಮಿತ್ತ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕೊಂಡೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಗಿರುವ ಘಟನೆ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯಲ್ಲಿ ನಡೆದಿದೆ.

ಹಗರಿಬೊಮ್ಮನಹಳ್ಳಿ ಬಳಿ ರಸ್ತೆ ಗುಂಡಿಯಲ್ಲಿ ಬಸ್ ಬಿದ್ದಿದ್ದು, ಬಸ್ ನ 4 ಟೈರ್ ಗಳು ಕಿತ್ತು ಹೊರಬಂದಿವೆ. ಬಸ್ ನಲ್ಲಿ ಶಿಕ್ಷಕರು, ಮಕ್ಕಳು ಸೇರಿ 53 ಜನರಿದ್ದರು.

ಅದೃಷ್ಟವಶಾತ್ ಮಕ್ಕಳು, ಶಿಕ್ಷಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಡ್ಯದ ಮದ್ದೂರಿನ ಶಾಲೆಯ ಮಕ್ಕಳು ಶೈಕ್ಷಣಿಕ ಪ್ರವಾಸಕ್ಕೆ ಖಾಸಗಿ ಬಸ್ ಅಲ್ಲಿ ಹೊರಟಿದ್ದರು. ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯಲ್ಲಿ ಬಸ್ ಅಪಘಾತಕ್ಕೀಡಾಗಿದೆ.

*ಕಾಂಗ್ರೆಸ್ ನಿಂದ ಬೆಳಗಾವಿಯಲ್ಲಿ ಮಹದಾಯಿ, ಕೃಷ್ಣಾ ಸಮಾವೇಷ*

Home add -Advt

 

https://pragati.taskdun.com/belagavid-k-shivakumarkrishna-mahadai-meeting/

Related Articles

Back to top button