Karnataka NewsLatest

ಅನೈತಿಕ ಸಂಬಂಧ; ಯುವಕನ ತಲೆ ಮೇಲೆ ಕಲ್ಲು ಹೇರಿ ಕೊಲೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಯರಗಟ್ಟಿ ಬಳಿಯ ಹಲಕಿ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದೆ. ವಣ್ಣೂರು ಗ್ರಾಮದ ರಮೇಶ ಗುಂಜಿ (24) ಕೊಲೆಯಾದ ಯುವಕ. ಈತ ಎರಡು ತಿಂಗಳುಗಳಿಂದ ವಿವಾಹಿತ ಮಹಿಳೆಯೊಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.

Home add -Advt

ವಿಷಯ ತಿಳಿದು ಕುಪಿತನಾದ ಮಹಿಳೆಯ ಪತಿ ಯಲ್ಲಪ್ಪ ಕಸೊಳ್ಳಿ ಇಂದು ಬೆಳಗ್ಗೆ ರಮೇಶನ ತಲೆಯ ಮೇಲೆ ಕಲ್ಲು ಹೇರಿ ಕೊಲೆಗೈದಿದ್ದಾಗಿ ಆರೋಪಿಸಲಾಗಿದೆ.

ಅನೈತಿಕ ಸಂಬಂಧ ಹೊಂದಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ವ್ಯಾಜ್ಯವಾಗಿ ರಾಜಿ ಪಂಚಾಯಿತಿ ಕೂಡ ನಡೆದಿತ್ತು. ಈ ವೇಳೆ ರಮೇಶ ಆರೋಪಿಗೆ 2 ಲಕ್ಷ ರೂ. ದಂಡ ಕೂಡ ನೀಡಿದ್ದ ಎನ್ನಲಾಗಿದೆ.

ಯಲ್ಲಪ್ಪನೊಂದಿಗೆ ಸೇರಿಕೊಂಡು ಆತನ ಪತ್ನಿ ರಮೇಶನ ಕೊಲೆಗೈದಿದ್ದಾಗಿ ಆರೋಪಿಸಿ ರಮೇಶ ಕುಟುಂಬದವರು ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Related Articles

Back to top button