Kannada NewsLatest

ಗುಡ್ಡದಿಂದ ಉರುಳಿ ಬಂದು ಕಾರುಗಳಿಗೆ ಅಪ್ಪಳಿಸಿದ ಬಂಡೆ; ಇಬ್ಬರ ಸಾವು

ಪ್ರಗತಿವಾಹಿನಿ ಸುದ್ದಿ, ಕೋಹಿಮಾ: ವ್ಯಾಪಕ ಮಳೆಗೆ ಗುಡ್ಡ ಕುಸಿತದಿಂದ ಬಂಡೆಗಳು ಜಾರಿ ಚಲಿಸುತ್ತಿದ್ದ ಕಾರುಗಳ ಮೇಲೆ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.

ದುಮಾಪುರ ಜಿಲ್ಲೆಯ ಚುಮುಕೆಡಿಮಾ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಗುಡ್ಡದಿಂದ ಉರುಳುತ್ತ ಬಂದ ಬಂಡೆಗಳು ಕೆಳಗೆ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರುಗಳಿಗೆ ಬಂದು ಅಪ್ಪಳಿಸಿದವು. ಪರಿಣಾಮ ಕಾರುಗಳು ನುಜ್ಜುಗುಜ್ಜಾದವು.

Related Articles

ಮೊದಲು ಉರುಳಿದ ಬಂಡೆ ಬಂದು ಬಡಿದ ಕಾರಿನಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡು ಮೃತಪಟ್ಟರು. ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದು ಅದರಲ್ಲಿದ್ದ ಮೂವರು ಗಾಯಗೊಂಡರು.

ಇದೇ ರಸ್ತೆಯಲ್ಲಿ ನಿಂತಿದ್ದ ಇನ್ನೊಂದು ಕಾರಿನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸುಮಾರು 5 ಸೆಕೆಂಡ್ ಗಳ ವಿಡಿಯೊ ಚಿತ್ರೀಕರಣ ದಾಖಲಾಗಿದ್ದು ಈಗ ವೈರಲ್ ಆಗಿದೆ.

Home add -Advt

Related Articles

Back to top button