Kannada NewsKarnataka NewsLatest

*ಭಕ್ತನಿಂದ ದೇವರಿಗೆ ಮೋಸ; 2000 ರೂಪಾಯಿ ಜೆರಾಕ್ಸ್ ನೋಟು ಕಾಣಿಕೆ ಹಾಕಿ ಹರಕೆ ತೀರಿಸಿದ ಭಕ್ತ*

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಭಕ್ತನೋರ್ವ ದೇವರಿಗೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. 2000 ರೂಪಾಯಿ ಮುಖ ಬೆಲೆಯ ನಕಲಿ ನೋಟುನನ್ನು ದೇವರ ಹುಂಡಿಗೆ ಹಾಕಿ ಹರಕೆ ತೀರಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಪ್ರಸಿದ್ಧ ಕಳಸೇಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ.

ದೇವಸ್ಥಾನದ ಹುಂಡಿ ಎಣಿಕೆ ಕಾರ್ಯದ ವೇಳೆ 2000 ಮುಖಬೆಲೆಯ ಜೆರಾಕ್ಸ್ ನೋಟು ಪತ್ತೆಯಾಗಿದೆ. ಇದು ಮಕ್ಕಳು ಆಟವಾಡಲು ಬಳಸುವ ನಕಲಿ ನೋಟುಗಳಾಗಿವೆ.

ಹುಂಡಿ ಎಣಿಕೆ ವೇಳೆ ಸಿಕ್ಕಿರುವ ಈ ನೋಟನ್ನು ಸಿಬ್ಬಂದಿಗಳು ಹರಿದು ಹಾಕಿದ್ದಾರೆ. ಈ ಹಿಂದೆ ಇದೇ ದೇವಸ್ಥಾನದಲ್ಲಿ ಭಕ್ತನೊಬ್ಬ ಇಡೀ ವಂಶವೃಕ್ಷ ಬರೆದು ಎಲ್ಲರಿಗೂ ಒಳ್ಳೆಯದು ಮಾಡು. ಮದುವೆಗೆ ಹೆಣ್ಣು ಸಿಗುವಂತೆ ಮಾಡು. ಮಾವನಿಗೆ ಒಳ್ಳೆ ಬುದ್ಧಿಕೊಡು, ಪಿಯುಸಿ ಪಾಸ್ ಆಗುವಂತೆ ಮಾಡು ಎಂದು ಬರೆದು ಹುಂಡಿ ಗೆ ಹಾಕಿದ್ದ.


Home add -Advt

Related Articles

Back to top button