Kannada NewsKarnataka NewsLatest
*ಸ್ನೇಹಿತನ ಭೇಟಿಗೆಂದು ಹೋದ ಶಿಕ್ಷಕ ಶವವಾಗಿ ಪತ್ತೆ*

ಪ್ರಗತಿವಾಹಿನಿ ಸುದ್ದಿ; ಮೈಸೂರು: ಸ್ನೇಹಿತನ ಭೇಟಿಗೆಂದು ಹೋದ ಶಿಕ್ಷಕರೊಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆಯ ಮೂಕನಹಳ್ಳಿ ಕೆರೆಯಲ್ಲಿ ಪತ್ತೆಯಾಗಿದೆ.
50 ವರ್ಷದ ರೇವಣ್ಣ ಮೃತ ಶಿಕ್ಷಕ. ಸ್ನೇಹಿತನ ಭೇಟಿಗೆ ಹೋಗುವುದಾಗಿ ಹೇಳಿ ಹೊರಟಿದ್ದ ಶಿಕ್ಷಕ ಮನೆಗೆ ವಾಪಸ್ ಆಗಿಲ್ಲ. ಮೂಕನಹಳ್ಳಿ ಕೆರೆ ಬಳಿ ರೇವಣ್ಣ ಅವರ ಚಪ್ಪಲಿ ಹಾಗೂ ಬೈಕ್ ಪತ್ತೆಯಾಗಿತ್ತು. ಅನುಮಾನಗೊಂಡು ಕೆರೆಯಲ್ಲಿ ಶೋಧ ನಡೆಸಿದಾಗ ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಶಿಕ್ಷಕ ರೇವಣ್ಣ, ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹುಣಸೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




