Belagavi NewsBelgaum NewsKannada NewsKarnataka NewsLatest

*ಕಾಡುಕೋಣ ಬೇಟೆ ಪ್ರಕರಣ; ಇಬ್ಬರು ಆರೋಪಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಖಾನಾಪೂರ ತಾಲೂಕಿನ ಗೋಲಿಹಳ್ಳಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಅವರೊಳ್ಳಿ ಗ್ರಾಮದ ಹೊರವಲಯದಲ್ಲಿ ಕಾಡುಕೋಣ ಬೇಟೆ ಆಡಿದ ಆರೋಪಿಗಳನ್ನು ಬಮ್ಧಿಸಲಾಗಿದೆ.

ಸೋಮನಿಂಗ್ ರವಳಪ್ಪ ಕುಡೊಳ್ಳಿ ( 50) ಹಾಗೂ ಪ್ರಭು ಸದಪ್ಪ ಕುಡೋಳಿ (38) ಬಂಧಿತರು. ಇಬ್ಬರನ್ನೂ ಬೆಳಗಾವಿ ವಿಭಾಗದ ಮಾನ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕಲ್ಲೋಲಕರ ರವರು ಹಾಗೂ ಮಾನ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು. ನಾಗರಗಾಳಿ ಉಪ ವಿಭಾಗ, ನಾಗರಗಾಳಿ ಶ್ರೀ ಮಲ್ಲಿನಾಥ ಕುಶನಾಳ ಇವರ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿಗಳು ಗೋಲಿಹಳ್ಳಿ ವಾಣಿಶ್ರೀ ಹೆಗಡೆ ಗೋಲಿಹಳ್ಳಿ ಅರಣ್ಯ ಇಲಾಖೆಯವರ ಮಾರ್ಗದರ್ಶನಲ್ಲಿ ಕಾಡುಕೋಣವನ್ನು ಕೊಂದ ಆರೋಪಿಗಳನ್ನು ಇವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪ್ರಕರಣವನ್ನು ದಾಖಲಿಸಿದ್ದಾರೆ.

ಈ ಸಂದರ್ಭದಲ್ಲಿ ಉಪ ವಲಯ ಅರಣ್ಯ ಅಧಿಕಾರಿಗಳಾದ ಅಶೋಕ್ ಬ ಹೂಲಿ . ಸಂಜಯ್ ಮಗದುಮ. ಕುಮಾರಸ್ವಾಮಿ ಹಿರೇಮಠ. ಗಸ್ತು ವನಪಾಲಕರಾದ ವೀರಪ್ಪ ಕರಲಿಂಗನವರ. ಅಜಯ್ ಭಾಸ್ಕರಿ. ಗಿರೀಶ ಮೆಕ್ಕೆದ. ಬಿ ಎ ಮಾಡಿಕ . ಮತ್ತು ಗೋಲಿಹಳ್ಳಿ ವಲಯದ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು‌.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button