Kannada NewsLatestNational

*ಸಂಜಯ್ ಸಿಂಗ್ ಮೇಲೆ ಇಡಿ ದಾಳಿ*

ಅದಾನಿ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಕ್ಕೆ ದಾಳಿಯಾಗಿದೆ’ಬಿಜೆಪಿ ವಿರುದ್ಧ ಎಎಪಿ ವಾಗ್ದಾಳಿ


ಪ್ರಗತಿವಾಹಿನಿ ಸುದ್ದಿ; ನವದೆಹಲಿ: ತಮ್ಮ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು ಸಂಸತ್ತಿನಲ್ಲಿ ಅದಾನಿ ಗ್ರೂಪ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸಿದ ಕಾರಣಕ್ಕಾಗಿಯೇ ಜಾರಿ ನಿರ್ದೇಶನಾಲಯ ‘ಟಾರ್ಗೆಟ್’ ಮಾಡಿದೆ ಎಂದು ಎಎಪಿ ಆರೋಪಿಸಿದೆ.

ದೆಹಲಿಯಲ್ಲಿರುವ ಪಕ್ಷದ ಮುಖಂಡ ಸಂಜಯ್ ಸಿಂಗ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ ನಂತರ ಆಮ್ ಆದ್ಮಿ ಪಕ್ಷ (ಎಎಪಿ) ಬುಧವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

ಅದಾನಿ ವಿಷಯದ ಬಗ್ಗೆ ಸಂಜಯ್ ಸಿಂಗ್ ಪ್ರಶ್ನೆಗಳನ್ನು ಎತ್ತುತ್ತಲೇ ಇದ್ದರು ಮತ್ತು ಅದಕ್ಕಾಗಿಯೇ ಅವರ ನಿವಾಸದ ಮೇಲೆ ದಾಳಿ ನಡೆಸಲಾಗುತ್ತಿದೆ. ಕೇಂದ್ರೀಯ ಸಂಸ್ಥೆಗಳು ಹಿಂದೆ ಏನನ್ನೂ ಕಂಡುಹಿಡಿಯಲಿಲ್ಲ ಮತ್ತು ಇಂದೂ ಏನನ್ನೂ ಕಂಡು ಹಿಡಿಯುವುದಿಲ್ಲ. ಮೊದಲಿಗೆ ಅವರು ನಿನ್ನೆ ಕೆಲವು ಪತ್ರಕರ್ತರ ನಿವಾಸದ ಮೇಲೆ ದಾಳಿ ನಡೆಸಿದರು ಮತ್ತು ಇಂದು ಸಂಜಯ್ ಸಿಂಗ್ ಅವರ ನಿವಾಸದ ಮೇಲೆ ದಾಳಿ ನಡೆಸಲಾಯಿತು ಎಂದು ಎಎಪಿ ವಕ್ತಾರ ರೀನಾ ಗುಪ್ತಾ ಹೇಳಿದ್ದಾರೆ.

ಇನ್ನೋರ್ವ ಎಎಪಿ ನಾಯಕ ಮಲ್ವಿಂದರ್ ಸಿಂಗ್ ಕಾಂಗ್, “ಬಿಜೆಪಿ ಸರ್ಕಾರವು ಸೇಡಿನ ಭಾವನೆಯಿಂದ ನಿರಂತರವಾಗಿ ಎಎಪಿ ಪಕ್ಷದ ಹಿಂದೆ ಇದೆ .ಆದರೆ ಇಲ್ಲಿಯವರೆಗೆ ಎಎಪಿ ನಾಯಕನ ಮನೆಯಿಂದ ನಯಾ ಪೈಸೆಯೂ ಸಿಕ್ಕಿಲ್ಲ, ಅದರ ಬಗ್ಗೆ ಪ್ರಶ್ನೆಗಳನ್ನು ಎತ್ತಬಹುದು. ನಮ್ಮ ಹಲವು ನಾಯಕರಿಗೆ ಚಿತ್ರಹಿಂಸೆ ನೀಡಿ ಬಂಧಿಸಲಾಗಿದೆ. ಇದು ಸಂಪೂರ್ಣವಾಗಿ ರಾಜಕೀಯ ಸೇಡು’ ಅಂದು ಅಭಿಪ್ರಾಯಿಸಿದ್ದಾರೆ.

ಇಡಿ ದಾಳಿಯನ್ನು ‘ಕಾಲ್ಪನಿಕ ಹಗರಣ’ ಎಂದು ಕರೆದಿರುವ ಎಎಪಿ ನಾಯಕ ಸೌರಭ್ ಭಾರದ್ವಾಜ್, “ಕಳೆದ 15 ತಿಂಗಳಿಂದ ತನಿಖೆ ನಡೆಯುತ್ತಿದೆ. ಇಡಿ ಮತ್ತು ಸಿಬಿಐ ಕನಿಷ್ಠ 1000 ಸ್ಥಳಗಳಲ್ಲಿ ದಾಳಿ ನಡೆಸಿವೆ ಆದರೆ ಎಲ್ಲಿಂದಲಾದರೂ ₹1 ಅನ್ನು ವಸೂಲಿ ಮಾಡಿಲ್ಲ. ಸಂಜಯ್ ಸಿಂಗ್ ನಿವಾಸದಲ್ಲಿಯೂ ಅವರಿಗೆ ಏನೂ ಸಿಗುವುದಿಲ್ಲ. ಬಿಜೆಪಿ ಚುನಾವಣೆಯಲ್ಲಿ ಸೋಲುತ್ತಿದೆ, ಇದು ಸತ್ಯ”
ಎಂದರು.

ಸಮಾಜವಾದಿ ಪಕ್ಷದ ನಾಯಕ ಘನಶ್ಯಾಮ್ ತಿವಾರಿ ಕೂಡ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. “ಇದು ಬಿಜೆಪಿ, ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಅದಾನಿಯವರ ಹೊಸ ಸರ್ವಾಧಿಕಾರದ ಮಾದರಿಯಾಗಿದೆ. ಸಂಸತ್ತಿನಲ್ಲಿ ಸಂಸದರ ಮೈಕ್‌ಗಳನ್ನು ಮ್ಯೂಟ್ ಮಾಡಲಾಗಿದೆ ಮತ್ತು ಸಂಸದರನ್ನು ಅಮಾನತುಗೊಳಿಸಲಾಗಿದೆ ಎಂದು ಸಿಂಗ್ ಹೇಳಿದರು.

ಏತನ್ಮಧ್ಯೆ, ಬಿಜೆಪಿ ನಾಯಕ ವೀರೇಂದ್ರ ಸಚ್‌ದೇವ ಅವರು ಆರೋಪಪಟ್ಟಿಯಲ್ಲಿ ಸಿಂಗ್ ಅವರ ಹೆಸರು ಈಗಾಗಲೇ ಇದೆ ಎಂದು ಹೇಳಿದ್ದಾರೆ. ಎಎಪಿ ದೆಹಲಿಯನ್ನು ಲೂಟಿ ಮಾಡಿದೆ ಎಂದು ಆರೋಪಿಸದರು.

“ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ದಾಳಿ ನಡೆಸಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಅವರ ನಿಷ್ಠಾವಂತ ಪ್ರಾಮಾಣಿಕ ನಾಯಕರು ಈಗ ಬಹಿರಂಗವಾಗುತ್ತಿದ್ದಾರೆ, ಅವರು ದೆಹಲಿ ಜನರನ್ನು ಲೂಟಿ ಮಾಡಿದ್ದಾರೆ ಎಂದು ನಾವು ಮೊದಲ ದಿನದಿಂದ ಹೇಳಿದ್ದೇವೆ. ಚಾರ್ಜ್‌ಶೀಟ್‌ನಲ್ಲಿ ಸಂಜಯ್ ಸಿಂಗ್ ಹೆಸರು ಈಗಾಗಲೇ ಇತ್ತು.” ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಸಚ್‌ದೇವ ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button