Kannada NewsLatest

ಅಭಿನಂದನ್ ಗೆ ನಾಳೆ “ವೀರ ಚಕ್ರ” ಪ್ರಶಸ್ತಿ ಪುರಸ್ಕಾರ

ಅಭಿನಂದನ್ ಗೆ ನಾಳೆ “ವೀರ ಚಕ್ರ” ಪ್ರಶಸ್ತಿ ಪುರಸ್ಕಾರ

ಪ್ರಗತಿವಾಹಿನಿ ಸುದ್ದಿ : ಭಾರತದ 73 ನೇ ಸ್ವಾತಂತ್ರೋತ್ಸವದ ಶುಭ ಸಂದರ್ಭದಲ್ಲಿ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಗೆ ಭಾರತ ಸರ್ಕಾರ ” ವೀರ ಚಕ್ರ ” ಪ್ರಶಸ್ತಿ ನೀಡಿ ಗೌರವಿಸಲಿದೆ.

ಕಳೆದ ಫೆಬ್ರವರಿ 27 ರಂದು ಪಾಕಿಸ್ತಾನದ ವಿಮಾನವನ್ನು ಕೆಡವಿ ಮತ್ತು ಆಕಸ್ಮಿಕವಾಗಿ ಆ ದೇಶಕ್ಕೆ ಕಾಲಿಟ್ಟ ಅಭಿನಂದನ್ ದೇಶದ ರಾಷ್ಟ್ರೀಯ ರಹಸ್ಯಗಳ ಬಗ್ಗೆ ಯಾವುದೇ ಮಾಹಿತಿ ಬಿಟ್ಟು ಕೊಡದೆ, ಧೈರ್ಯದಿಂದ ಎದುರಿಸಿ ವಾಪಸಾದ ರಾಷ್ಟ್ರೀಯ ವೀರ ಎನಿಸಿಕೊಂಡರು. ಪಾಕಿಸ್ತಾನದಲ್ಲಿ ಜೈಲಿನಲ್ಲಿದ್ದಾಗ ಮಾಡಿದ ಧೈರ್ಯಶಾಲಿ ನಿಲುವಿಗೆ ಅವರಿಗೆ ‘ವೀರ ಚಕ್ರ’ ಪ್ರಶಸ್ತಿ ನೀಡಲಾಗುತ್ತಿದೆ. ಪರಮ ವೀರ ಚಕ್ರ ಮತ್ತು ಮಹಾ ವೀರ ಚಕ್ರಗಳ ನಂತರ ಇದು ಸೈನ್ಯಕ್ಕೆ ದೊರೆತ ಮೂರನೇ ಅತ್ಯುನ್ನತ ಗೌರವವಾಗಿದೆ.

ಫೆಬ್ರವರಿ 26 ರಂದು ಅಭಿನಂದನ್ ಪಾಕಿಸ್ತಾನ ವಾಯುಪಡೆಯ ಎಫ್ -16 ಅನ್ನು ತನ್ನ ಮಿಗ್‌ ವಿಮಾನದಿಂದ ಕೆಡವಿ ಉರುಳಿಸಿದ್ದರು. ಘಟನೆಯ ಬಳಿಕ ತನ್ನ ಮಿಗ್ ಕೂಡ ನೆಲಕ್ಕೆ ಅಪ್ಪಳಿಸಿತು. ವಿಮಾನದಿಂದ ಜಿಗಿದಿದ್ದ ಅಭಿನಂದನ್ ಪಾಕ್ ಆಕ್ರಮಿತ ಸ್ಥಳಕ್ಕೆ ಬಂದಿಳಿದಿದ್ದರು.. ಸ್ಥಳೀಯರು ಆತನ ಮೇಲೆ ಹಲ್ಲೆ ಮಾಡಿ ಸೆರೆಹಿಡಿದು ಪಾಕಿಸ್ತಾನದ ಸೈನ್ಯಕ್ಕೆ ಒಪ್ಪಿಸಿದ್ದರು.

ಅವರು ಎಷ್ಟೇ ಒತ್ತಡಕ್ಕೆ ಒಳಗಾಗಿದ್ದರೂ ಭಾರತ ಮಿಲಿಟರಿಯ ಬಗ್ಗೆ ಯಾವುದೇ ಸೂಕ್ಷ್ಮ ಮಾಹಿತಿಯನ್ನು ಅವರು ಬಹಿರಂಗಪಡಿಸಲಿಲ್ಲ. ನಂತರ, ಭಾರತ ಸೇರಿದಂತೆ ವಿಶ್ವ ರಾಷ್ಟ್ರಗಳ ಒತ್ತಡಕ್ಕೆ ಮಣಿದ ಪಾಕಿಸ್ತಾನ ಸರ್ಕಾರ ವರ್ಧಮಾನ್ ರನ್ನು ವಾಗಾ ಗಡಿಗೆ ಒಪ್ಪಿಸಿತು. ಅಭಿನಂದನ್ ಅವರ ಸಾಹಸವು ಒಮ್ಮೆ ಅವರನ್ನು ನಿಜವಾದ ನಾಯಕನನ್ನಾಗಿ ಮಾಡಿತು. ಭಾರತದ ಅತ್ಯುನ್ನತ ಪ್ರಶಸ್ತಿಯಾದ ವೀರ ಚಕ್ರ ಪ್ರಶಸ್ತಿಗೆ ಭಾರತೀಯ ವಾಯುಪಡೆಯು ಅಭಿನಂದನ್ ಅವರ ನಾಮ ನಿರ್ದೇಶನ ಮಾಡಿತ್ತು. ಕೇಂದ್ರಕ್ಕೆ ಪ್ರಸ್ತಾಪಗಳನ್ನು ಕಳುಹಿಸಲಾಗಿತ್ತು.  ತಮಿಳು ನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಿದ್ದರು.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button