Kannada NewsKarnataka News

ಹೆಸ್ಕಾಂ ಸಿಬ್ಬಂದಿ ಅವಿಶ್ರಾಂತ ದುಡಿಮೆ

ಹೆಸ್ಕಾಂ ಸಿಬ್ಬಂದಿ ಅವಿಶ್ರಾಂತ ದುಡಿಮೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಇತ್ತೀಚಿನ ಪ್ರವಾಹದಲ್ಲಿ ಜನಪ್ರತಿನಿಧಿಗಳು, ಸಾರ್ವಜನಿಕರು, ಸರಕಾರದ ವಿವಿಧ ಇಲಾಖೆಗಳು ಎಲ್ಲರೂ ಒಟ್ಟಾಗಿ, ನಿರಂತರ ಕೆಲಸ ಮಾಡಿದ್ದರಿಂದ ಬೆಳಗಾವಿ ದೊಡ್ಡ ಅಪಾಯದಿಂದ ಉಳಿಯುವಂತಾಗಿದೆ.

Home add -Advt

ಇಡೀ ಬೆಳಗಾವಿ ಮುಳುಗಿದ್ದರೂ ಹೆಸ್ಕಾಂ ಸಿಬ್ಬಂದಿ ಹಗಲು, ರಾತ್ರಿ ಕೆಲಸ ಮಾಡಿದ್ದಾರೆ. ಹಾಗಾಗಿ ನಗರ ವಿದ್ಯುತ್ ಸಮಸ್ಯೆಯಿಂದ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಳಲಲಿಲ್ಲ. ಹೆಸ್ಕಾಂ ಬೆಳಗಾವಿ ನಗರ ಉಪವಿಭಾಗ 1 ಮತ್ತು 2ರ ಚಟುವಟಿಕೆ ಮತ್ತು ದೂರುಗಳ ಕುರಿತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅರವಿಂದ ಗದಗಕರ್ ಪ್ರಗತಿವಾಹಿನಿಗೆ ಮಾಹಿತಿ ನೀಡಿದ್ದಾರೆ.

ಪ್ರವಾಹದ ವೇಳೆ 16 ಟ್ರಾನ್ಸ್ಫಾರ್ಮರ್ ವಿಫಲವಾಗಿದ್ದವು. ಸುಮಾರು 25 ಕಂಬಗಳು ಬಿದ್ದಿದ್ದವು. 3 ಸಾವಿರದಷ್ಟು ದೂರುಗಳು ದಾಖಲಾಗಿದ್ದವು. ಅತ್ಯಂತ ಅಪಾಯಕಾರಿ ಪರಿಸ್ಥಿತಿಗಳನ್ನೆದುರಿಸಿಯೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ಎಲ್ಲ ಸಿಬ್ಬಂದಿ ಹಗಲು, ರಾತ್ರಿ ಯುದ್ದೋಪಾದಿಯಲ್ಲಿ ಕೆಲಸ ಮಾಡಿದ್ದಾರೆ. ಅವರೆಲ್ಲರ ಶ್ರಮದಿಂದ ನಾವು ಇಂತಹ ಕಠಿಣ ಸಂದರ್ಭವನ್ನೂ ಯಶಸ್ವಿಯಾಗಿ ಎದುರಿಸಲು ಸಾಧ್ಯವಾಯಿತು

-ಅರವಿಂದ ಗದಗಕರ್,

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್

 

Related Articles

Back to top button