Belagavi NewsBelgaum NewsKannada News

ಈ ಪ್ರದೇಶಗಳಿಗೆ 3 ದಿನ ನೀರು ಸರಬರಾಜು ವ್ಯತ್ಯಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗುರುದೇವ ರಾನಡೆ ಮಂದಿರ ಹಿಂದವಾಡಿ ಹತ್ತಿರ ಸರಬರಾಜಾಗುವ 450 ಎಂ.ಎಂ ಪಿ.ಎಸ್‌ಸಿ  ಪೈಪಲೈನ್‌ನಲ್ಲಿ ಸೋರಿಕೆಯಾಗಿರವುದರಿಂದ ದಿನಾಂಕ 5.8.2024 ರಂದು ತುರ್ತು ದುರಸ್ಥಿ ಕೈಗೊಳ್ಳುವುದರಿಂದ ದಿನಾಂಕ 5-8-2024ರಿಂದ 7-8-2024 ರವರೆಗೆ ಬೆಳಗಾವಿ ನಗರದ ದಕ್ಷಿಣ ಭಾಗಕ್ಕೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದೆ.  

ಬೆಳಗಾವಿ ನಗರಕ್ಕೆ ಸರಬರಾಜಾಗುವ ನೀರಿನ ಕೊಳವೆಯಲ್ಲಿ ಗುರುದೇವ ರಾನಡೆ ಮಂದಿರ ಹಿಂದವಾಡಿ ಸೋರಿಕೆವುಂಟಾಗಿರುವುದರಿಂದ ತುರ್ತಾಗಿ ದಿ.5-8-2024 ರಂದು ದುರಸ್ಥಿ ಕಾರ್ಯ ಕೈಗೊಳ್ಳುವ ಹಿನ್ನಲೆಯಲ್ಲಿ ಬೆಳಗಾವಿ ದಕ್ಷಿಣ ಭಾಗದ 24X7 ಪ್ರಾತ್ಯಕ್ಷಿಕ ವಲಯ ಸೇರಿ ನಗರದ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 5-8-2024 ರಿಂದ 7-8-2024 ರವರೆಗೆ ನೀರು ಸರಬರಾಜು ಮಾಡುವಲ್ಲಿ (ಸರದಿಯಲ್ಲಿ) ಷೆಡ್ಯೂಲ್‌ನಲ್ಲಿ ವ್ಯತ್ಯಯ ಉಂಟಾಗುವುದು.
ಸರಬರಾಜು ವ್ಯತ್ಯಯ ಉಂಟಾಗುವ ದಕ್ಷಿಣ ಪ್ರದೇಶಗಳು: ಆರ್.ಸಿ.ನಗರ ಮೊದಲನೇ & ಎರಡನೇ ಹಂತ, ಹಿಂದವಾಡಿ, ನಾನಾವಾಡಿ, ಟಿಲಕವಾಡಿ, ಶಾಸ್ತ್ರಿ ನಗರ, ಸಮರ್ಥ ನಗರ, ವಡಗಾವಿ, ಶಹಾಪೂರ, ಕಪಿಲೇಶ್ವರ ನಗರ, ಮಜಗಾಂವ, ರಾಜಾರಾಮನಗರ, ಭಾರತ ನಗರ, ಹಳೆ ಬೆಳಗಾವಿ, ಚಿದಂಬರನಗರ ಹಾಗೂ ದಕ್ಷಿಣ ಪ್ರಾತ್ಯಕ್ಷಿಕ ವಲಯ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button