Kannada NewsKarnataka News

ಬಿಜೆಪಿ ಸಂಕಲ್ಪ ಯಾತ್ರೆಗೆ ಬೆಳಗಾವಿಯಲ್ಲಿ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಭಾರತೀಯ ಜನತಾಪಾರ್ಟಿ ಹಮ್ಮಿಕೊಂಡಿರುವ ಸಂಕಲ್ಪ ಯಾತ್ರೆಗೆ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲು ಬೆಳಗಾವಿಯಲ್ಲಿ ಬುಧವಾರ ಚಾಲನೆ ನೀಡಿದರು.
ಪ್ರತಿ ಸಂಸದರು ಹಾಗೂ ಅವರ ಜೊತೆ ಕಾರ್ಯಕರ್ತರು ಅವರವರ ಕ್ಷೇತ್ರದಲ್ಲಿ 150 ಕಿಮೀ ಪಾದಯಾತ್ರೆ ನಡೆಸಬೇಕು ಎಂದು ಕಟೀಲು ಕರೆ ನೀಡಿದರು.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ ಅಂಗಡಿ , ಶಾಸಕರಾದ ಅಭಯ ಪಾಟೀಲ, ಮಹಾಂತೇಶ ದೊಡ್ಡಗೌಡರ, ಮಹಾಂತೇಶ್ ಕವಟಗಿಮಠ, ಮಾಜಿ ಶಾಸಕರಾದ ವಿಶ್ವನಾಥ್ ಪಾಟಿಲ್, ಸಂಜಯ್ ಪಾಟೀಲ್,  ಮುಖಂಡರಾದ ಕಿರಣ ಜಾಧವ, ಎಂ.ಬಿ.ಜಿರಲಿ, ಈರಣ್ಣ ಕಡಾಡಿ, ರಾಜೇಂದ್ರ ಹರಕುಣಿ, ಆರ್.ಎಸ್.ಮುತಾಲಿಕ ದೇಸಾಯಿ, ಉಜ್ವಲಾ ಬಡವಣಾಚೆ  ಮುಂತಾದವರು ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button