ಪ್ರಗತಿವಾಹಿನಿ ಸುದ್ದಿ: ಕೇದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ 2025-26 ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಹೊಸ ಆದಾಯ ತೆರಿಗೆ ಮಂಡಿಸುವುದಾಗಿ ಘೋಷಿಸಿದ್ದಾರೆ.
12 ಲಕ್ಷ ರೂ ವರೆಗೆ ತೆರಿಗೆ ವಿನಾಯಿತಿ ಪಡೆಯಲು ಅವಕಾಶ ನೀಡಲಾಗಿದೆ.
4ಲಕ್ಷ ರೂ. ವರೆಗೆ ಸಂಪೂರ್ಣ ವಿನಾಯಿತಿ, 8 ಲಕ್ಷ ರೂ ವರೆಗೆ 5%, 12 ಲಕ್ಷದವರೆಗೆ 10%, 16 ಲಕ್ಷದವರೆಗೆ 15%, 24 ಲಕ್ಷದವರೆಗೆ 20%, 24 ಲಕ್ಷ ರೂ ಗಿಂತ ಹೆಚ್ಚಾದರೆ 30% ತೆರಿಗೆ ವಿಧಿಸಲಾಗಿದೆ.
ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆ ಮಂಡನೆ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ದೇಶದ ಬೆಳವಣಿಗೆಗಾಗಿ ರಫ್ತು ಉತ್ತೇಜಿಸಲು ರಫ್ತು ಉತ್ತೇಜನ ಮಿಷನ್ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ