Kannada NewsKarnataka NewsLatest

ಸೌದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ಶ್ರೀಶೈಲ, ಕಾಶಿ ಜಗದ್ಗುರು, ಹುಕ್ಕೇರಿ ಶ್ರೀಗಳ ಭೇಟಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಶ್ರೀಶೈಲ ಜಗದ್ಗುರುಗಳು, ಕಾಶಿ ಜಗದ್ಗುರುಗಳು ಹಾಗೂ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಶ್ರೀಗಳುಜಿಲ್ಲೆಯ ಸೌದತ್ತಿಯ ಯಲ್ಲಮ್ಮ  ಕ್ಷೇತ್ರಕ್ಕೆ ಭೇಟಿ ನೀಡಿದ್ದರು.
ಜಗನ್ಮಾತೆ ಯಲ್ಲಮ್ಮ ದೇವಿಯ ವಿಶೇಷವಾದ ತೇಜಸ್ಸಿನ ಮೂರ್ತಿಗೆ ಕುಂಕುಮಾರ್ಚನೆಯನ್ನು ಶ್ರೀಗಳು ನೆರವೇರಿಸಿದರು. ಈ ಸಂದರ್ಭದಲ್ಲಿ ಸವದತ್ತಿಯ ಶಾಸಕ ಆನಂದ ಮಾಮನಿ ಅವರು ಉಪಸ್ಥಿತರಿದ್ದರು. ಆಡಳಿತಾಧಿಕಾರಿ ರವಿ ಕೊಟಾರಗಸ್ತಿ ಅವರು ಎಲ್ಲರನ್ನೂ ಸ್ವಾಗತಿಸಿದರು.
 ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಶೈಲ ಜಗದ್ಗುರುಗಳು, ಯಲ್ಲಮ್ಮನ ಸುಕ್ಷೇತ್ರ  ಅದ್ಭುತವಾಗಿ ಬೆಳೆದು ನಿಂತಿದೆ. ಲಕ್ಷಾಂತರ ಜನ ಇಲ್ಲಿಗೆ ಬಂದು ಹೋಗಿ ತಮ್ಮ ಇಷ್ಟಾರ್ಥವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರು.
 ಇದೇ ಸಂದರ್ಭದಲ್ಲಿ ಕಾಶಿ ಜಗದ್ಗುರುಗಳು ಮಾತನಾಡಿ, ದೇವಿಯ ಕ್ಷೇತ್ರ ಬಹಳ ಶ್ರೇಷ್ಠವಾಗಿರುವ ಕ್ಷೇತ್ರ. ಈ ಕ್ಷೇತ್ರದ ಸದ್ಬಳಕೆಯನ್ನು  ಎಲ್ಲರೂ ಮಾಡಿಕೊಳ್ಳಬೇಕು ಎಂದರು.
ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಶಾಸಕ ಆನಂದ ಮಾಮನಿಯವರ ಪರಿಶ್ರಮದ ಫಲ ಇವತ್ತು ಕ್ಷೇತ್ರ ಉನ್ನತ ಮಟ್ಟಕ್ಕೆ  ಬೆಳೆಯುತ್ತಿದೆ. ಈ ಕ್ಷೇತ್ರದ ಶಾಸಕರು ಎಲ್ಲರೊಂದಿಗೆ ಬೆರೆತು ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ರವಿ ಕೋಟಾರಗಸ್ತಿ ಅವರ ಆಡಳಿತ  ಇನ್ನೂ ಹೆಚ್ಚು ಹೆಚ್ಚು ಕಾರ್ಯವನ್ನು ನಿರ್ವಹಿಸಲಿ ಎಂದರು.

Related Articles

Back to top button