National

*ನಾಳೆ ಬೆಳಿಗ್ಗೆ ಸರ್ವಪಕ್ಷಗಳ ಸಭೆ ಕರೆದ ಕೇಂದ್ರ ಸರ್ಕಾರ*

ಪ್ರಗತಿವಾಹಿನಿ ಸುದ್ದಿ: ಪಾಕಿಸ್ತಾನ ಉಗ್ರರ ವಿರುದ್ಧ ಭಾರತೀಯ ಸೇನೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಕೈಗೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆ ಕರೆದಿದೆ.

ನಾಳೆ ಬೆಳಿಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆಯಲಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ ಹಾಗೂ ಸರ್ಕಾರ ಹಾಗೂ ಸೇನೆ ಕೈಗೊಳ್ಳಬೇಕಿರುವ ಮುಂದಿನ ನಡೆ, ದೇಶಾದ್ಯಂತ ಕೈಗೊಳ್ಳಬೇಕಿರುವ ಕಟ್ಟೆಚ್ಚರ ಮೊದಲಾದ ವಿಚಾರಗಳ ಬಗ್ಗೆ ಸಮಗ್ರ ಚರ್ಚೆ ನಡೆಯಲಿದೆ.

ಆಪರೇಷನ್ ಸಿಂಧೂರ ಕಾರ್ಯಾಚರಣೆ ಬೆನ್ನಲ್ಲೇ ಕೆಲವೇ ಹೊತ್ತಲ್ಲಿ ಭಾರತೀಯ ಸೇನೆ ಸಮಾರಾಭ್ಯಾಸ ಆರಂಭಿಸಲಿದೆ. ಈಗಾಗಲೇ ಪಂಜಾಬ್ ಗಡಿಯಲ್ಲಿ ಒಂದು ಸುತ್ತಿನ ಸಮರಾಭ್ಯಾಸ ನಡೆಸಿರುವ ಸೇನೆ ಎಲ್ಲೆಡೆ ಕಟ್ಟೆಚ್ಚರ ವಹಿಸಿದೆ.

Home add -Advt

ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಸೂಚಿಸಲಾಗಿದ್ದು, ಕರಾವಳಿ ಕಾವಲು ಪಡೆಗಳು ಹಡಗು, ಬೋಟ್ ಗಳನ್ನು ಪರಿಶೀಲನೆ ನಡೆಸಿವೆ. ದೇಶಾದ್ಯಂತ ಕರಾವಳಿ ತೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

Related Articles

Back to top button