Belagavi NewsBelgaum NewsKannada NewsPolitics
*ನಾವು ನೀವು ಜೊತೆಯಾಗಿರೋಣ: ಬೆಳಗಾವಿಯಲ್ಲಿ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಬಾಗವತ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಈ ಸಮಯದಲ್ಲಿ ಎಲ್ಲರೂ ಜೊತೆಗಿದ್ದಾರೆ, ನಾವು ನೀವು ಜೊತೆಯಾಗಿರೋಣ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಬಾಗವತ್ ಕರೆ ನೀಡಿದ್ದಾರೆ.
ಇಂದು ಬೆಳಗಾವಿಯ ಸಾಂಬ್ರಾ ಏರ್ಪೋರ್ಟ್ ನಲ್ಲಿ ಆಪರೇಷನ್ ಸಿಂಧೂರ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆ ಉತ್ತರಿಸಿದ ಅವರು, ಈ ಸಮಯದಲ್ಲಿ ಎಲ್ಲರೂ ಜೊತೆಗಿದ್ದಾರೆ, ನಾವು ನೀವು ಜೊತೆಯಾಗಿರೋಣ(ಸಬ್ ಲೋಗ್ ಸಾಥ್ ಹೈ ಇಸ್ ಸಮಯ್ ಮೇ.. ಆಪ್ ಔರ್ ಹಮ್) ಎಂದ ಹೇಳಿ ತೆರಳಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗದ ಮೂಲಕ ಧಾರವಾಡಕ್ಕೆ ತೆರಳಿದ ಅವರು, ಧಾರವಾಡದಲ್ಲಿ ಎರಡು ದಿನ ತಂಗಲಿದ್ದಾರೆ. ಧಾರವಾಡದ ರಾಷ್ಟ್ರೋತ್ಥಾನ ಕೇಂದ್ರದಲ್ಲಿ ನಡೆಯಲಿರುವ ಆರ್ ಎಸ್ ಎಸ್ ಕ್ಯಾಂಪ್ ನಲ್ಲಿ ಭಾಗಿಯಾಗಲಿದ್ದಾರೆ.