Belagavi NewsBelgaum NewsKannada NewsKarnataka News

*ರಂಗ ಸೃಷ್ಟಿ ಕಲಾವಿದರಿಂದ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ನಾಟಕ ಯಶಸ್ವಿ ಪ್ರದರ್ಶನ*

​ 

​ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ​ಮಹಾಸಾಧ್ವಿ ಹೇಮರಡ್ದಿ ಮಲ್ಲಮ್ಮ ಜಯಂತ್ಯುತ್ಸವ ಅಂಗವಾಗಿ​ ಬೆಳಗಾವಿಯ ರಂಗಸೃಷ್ಟಿ ತಂಡದ ಕಲಾವಿದರಿಂದ ನೆಹರು ನಗರದ ಕನ್ನಡ ಭವನದಲ್ಲಿ ಇಳೆಯ ಬೆಳಕು (ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ)  ನಾಟಕ ಪ್ರದರ್ಶನ​ ಯಶಸ್ವಿಯಾಗಿ ನಡೆ​ಯಿತು.

ಸುಮಾರು 600 ವ​ರ್ಷಗಳ ಹಿಂದೆ ಕನಾ೯ಟಕ- ಆಂಧ್ರಪ್ರದೇಶ ಗಡಿಯಲ್ಲಿ ಆಗಿಹೋದ ಕಥೆಯನ್ನಾಧರಿಸಿ ನಲವಡಿ ನೀಲಕಂಠ ಶಾಸ್ತ್ರೀಯವರು ಬರೆದ ನಾಟಕದ ವಿಷಯವನ್ನು ಮೂಲವಾಗಿಟ್ಟು ಮಲ್ಲಮ್ಮನ ಮೈದುನ  ಮಹಾಯೋಗಿ ವೇಮನರ ಚರಿತ್ರೆಯನ್ನು ಸಹ ಸಂಕ್ಷಿಪ್ತವಾಗಿ ಅಳವಡಿಸಿ ರಚಿಸಿದ​ ಈ ನಾಟಕ​ವನ್ನು ಕಿಕ್ಕಿರಿದ ಪ್ರೇಕ್ಷಕರ ಮಧ್ಯೆ ಪ್ರದರ್ಶಿಸಲಾಯಿತು.

ಡಾ.ರಾಮಕೃಷ್ಣ ಮರಾಠೆ ರಚಿಸಿರುವ ನಾಟಕವನ್ನು ಶಿರೀಶ್ ಜೋಶಿ ನಿರ್ದೇಶಿಸಿದ್ದ​ರು. ರಡ್ಡಿ ಸಂಘ ಹಾಗೂ ಕನ್ನಡ ಭವನದ ಸಹಯೋಗದಲ್ಲಿ​ ನಡೆದ ಈ ನಾಟಕದ ಪ್ರಯೋಜಕತ್ವವನ್ನು ರಂಗಸೃಷ್ಟಿ ಅಧ್ಯಕ್ಷರೂ ಆಗಿರುವ ರಮೇಶ ಜಂಗಲ್ ವಹಿಸಿಕೊಂಡಿ​ದ್ದರು.

Home add -Advt

 ಶಾಂತಾ ಆಚಾರ್ಯ, ಶಾರದಾ ಭೋಜ್ , ಶರಣಗೌಡ ಪಾಟೀಲ್,  ಶರಣಯ್ಯ ಮಠಪತಿ, ಶ್ರದ್ದಾ ಪಾಟೀಲ್, ಶೋಭಾ ಬನಶಂಕರಿ, ವಿಶ್ವನಾಥ ದೇಸಾಯಿ, ಜಯಶ್ರೀ ಕೆಎಂ, ಶಾಂತಾ ಜಂಗಲ್, ರಮೇಶ್ ಮಿರ್ಜಿ,​ ಡಾ. ಪಿ. ಜಿ ಕೆಂಪಣ್ಣವರ, ರಮೇಶ್ ಜಂಗಲ್, ಜಯಶ್ರೀ ಕ್ಷೀರಸಾಗರ್, ಜ್ಯೋತಿ ಬದಾಮಿ, ಶೈಲಜಾ ಭಿಂಗೆ, ಜಯಶೀಲ ಬ್ಯಾಕೋಡ, ಪುಷ್ಪಾ ಮರಡೂರ, ಗಂಗಾ ತಿಮ್ಮನಾಯ್ಕರ್​, ಸುಕಲ್ಪ ಮಠಪತಿ​ ಮತ್ತಿತರರು ಪಾತ್ರ ನಿರ್ವಹಿ​ಸಿದರು.

 ಶರಣಗೌಡ ಪಾಟೀಲರವರ ರಂಗಸಜ್ಜಿಕೆಯಲ್ಲಿ, ದಿವಂಗತ ನಾಟ್ಯ ಭೂಷಣ ಏಣಗಿ ಬಾಳಪ್ಪ ಸಂಗೀತ ನಿರ್ದೇಶನದಲ್ಲಿ, ವಿದುಷಿ ಮಂಜುಳಾ ಜೋಶಿ, ಮುದ್ದು ಮೋಹನ, ಮತ್ತು ದಿವಂಗತರಾದ ಶಿವಾನಂದ್ ಪಾಟೀಲ್ ಹಾಗೂ ಸುಭದ್ರಮ್ಮ ಮನ್ಸೂರ್ ಅವರ ಹಿನ್ನೆಲೆ ಗಾಯನದಲ್ಲಿ ನಾಟಕ ​ಅತ್ಯಂತ ಮನೋಜ್ಞವಾಗಿ ನಡೆಯಿತು.

 ನಾರಾಯಣ ಗಣಚಾರಿ ತಬಲಾ ವಾದನ, ರಮೇಶ್ ಮಿರ್ಜಿ ಸಂಗೀತ ನಿರ್ವಹಣೆ, ಶಾಂತಾ ಆಚಾರ್ಯ ನೃತ್ಯ ಸಂಯೋಜನೆ,​ ಬೆಳಕಿನ ವಿನ್ಯಾಸಕರಾಗಿ ಗುರು ಪೇಡ್ನೇಕರ,​ ರಾಜಕುಮಾರ್ ಕುಂಬಾರ್ ತಾಂತ್ರಿಕ ನೆರವು ನೀ​ಡಿದರು.

​ ಮುಖ್ಯ ಅತಿಥಿಗಳಾಗಿ  ಹಿರಿಯ ಸಾಹಿತಿಗಳಾದ ಪ್ರೊ.ಬಿ ಎಸ್ ಗವಿಮಠ, ಧಾರವಾಡ  ಪೋಲೀ​ಸ್ ಹೆಚ್ಚುವರಿ ಅಧೀಕ್ಷಕರಾದ ಎನ್ ವಿ ಬರಮನಿ ಆಗಮಿಸಿದ್ದರು.

​ 

Related Articles

Back to top button