Belagavi NewsBelgaum NewsKannada News

*ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರಿ ಮಳೆ: ಬೆಳಗಾವಿಯ ನಾಲ್ಕು ಸೇತುವೆ ಮುಳುಗಡೆ*

ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರ ಪಶ್ಚಿಮಘಟ್ಟ ಪ್ರದೇಶದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕೃಷ್ಣಾ ನದಿ ಹಾಗೂ ಅದರ ಉಪನದಿಗಳ 4 ಸೇತುವೆಗಳು ಮುಳಗುಗಡೆಯಾಗಿವೆ.

ಈ ಬಾರಿ ಮಳೆಯ ಅಬ್ಬರ ಜೋರಾಗಿದ್ದು, ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಇದು ಸಹಜವಾಗಿ ರೈತಾಪಿ ಜನರಲ್ಲಿ ಸಂತಸ ಮೂಡಿಸಿದೆ. ಮಹಾರಾಷ್ಟ್ರದ ಪಶ್ಚಿಮಘಟ್ಟ ಹಾಗೂ ಚಿಕ್ಕೋಡಿ,ನಿಪ್ಪಾಣಿ ತಾಲೂಕಿನಲ್ಲಿ ಕಳೆದ 4, 5 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಪರಿಣಾಮ ಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗಳಿಗೆ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಲಿಕವಾಡ- ದತ್ತವಾಡ, ಬಾರವಾಡ-ಕುನ್ನೂರ, ಕಾರ ದಗಾ-ಭೋಜ, ಭೋಜವಾಡಿ-ಹುಣ್ಣರಗಿ ಹೀಗೆ 4 ಸೇತುವೆಗಳು ಜಲಾವೃತಗೊಂಡಿವೆ. 

ಕ್ಷಣ-ಕ್ಷಣಕ್ಕೂ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಇದರಿಂದಾಗಿ ಇನ್ನಷ್ಟು ಸೇತುವೆಗಳು ಜಲಾವೃತ ಆಗುವ ಸಾಧ್ಯತೆಗಳು ಇವೆ. ಚಿಕ್ಕೋಡಿ ತಾಲೂಕಾಡಳಿತ ನದಿತೀರದಲ್ಲಿ ತೀವ್ರ ಕಟ್ಟೆಚರ ಘೋಷಿಸಿದೆ.

.

Home add -Advt

Related Articles

Back to top button