*ಬೆಳಗಾವಿ–ಗೋವಾ ಸೌಹಾರ್ಧತೆ ಇನ್ನಷ್ಟು ಬಲಗೊಳ್ಳಲಿ: ಪ್ರತಿಮಾ ಧೋಂಡ್* *ಬಿಸಿಸಿಐ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ* *News in Kannada, English, Marathi*

ಬೆಳಗಾವಿ–ಗೋವಾ ಸೌಹಾರ್ಧತೆ ಇನ್ನಷ್ಟು ಬಲಗೊಳ್ಳಲಿ: ಪ್ರತಿಮಾ ಧೋಂಡ್
ಬಿಸಿಸಿಐ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವ್ಯವಹಾರಿಕ ಹಾಗೂ ಸಾಂಸ್ಕೃತಿಕವಾಗಿ ಬೆಳಗಾವಿ ಮತ್ತು ಗೋವಾ ನಡುವೆ ಉತ್ತಮ ಬಾಂಧವ್ಯವಿದ್ದು, ಈ ಸೌಹಾರ್ಧ ಸಂಬಂಧ ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಗೊಳ್ಳಬೇಕು ಎಂದು ಗೋವಾ ಚೆಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಧ್ಯಕ್ಷೆ ಪ್ರತಿಮಾ ಧೋಂಡ್ ಹೇಳಿದರು.

ನಗರದ ಉದ್ಯಮಬಾಗದಲ್ಲಿರುವ ಫೌಂಡ್ರಿ ಕ್ಲಸ್ಟರ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಬೆಳಗಾವಿ ಚೆಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ (ಬಿಸಿಸಿಐ) ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಬೆಳಗಾವಿ ಮತ್ತು ಗೋವಾ ನಡುವೆ ನೆರೆಹೊರೆಯ ರಾಜ್ಯಗಳ ನಡುವಿನ ಆತ್ಮೀಯ ಸಂಬಂಧವಿದೆ. ಬೆಳಗಾವಿಯ ಅನೇಕ ಉದ್ಯಮಿಗಳು ಗೋವಾದಲ್ಲಿಯೂ ಯಶಸ್ವಿಯಾಗಿ ವ್ಯವಹಾರ ನಡೆಸುತ್ತಿದ್ದಾರೆ. ಉದ್ಯಮಾಭಿವೃದ್ಧಿ, ಕೌಶಲ್ಯ ತರಬೇತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎರಡೂ ರಾಜ್ಯಗಳ ನಡುವೆ ಉತ್ತಮ ಸಹಕಾರವಿದೆ. ಗೋವಾ ಚೆಂಬರ್ ಕೂಡ ಬಿಸಿಸಿಐ ಜತೆ ಉತ್ತಮ ಬಾಂಧವ್ಯ ಹೊಂದಿದ್ದು, ಈ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಎದುರು ನೋಡುತ್ತಿದೆ ಎಂದು ಅವರು ಹೇಳಿದರು.
ವಾಣಿಜ್ಯೋದ್ಯಮ ಸಂಘಗಳು ಬದ್ಧತೆ ಹಾಗೂ ನಿಷ್ಠೆಯಿಂದ ಕೆಲಸ ಮಾಡುವ ಸಂಸ್ಥೆಗಳಾಗಿವೆ. ಇಂತಹ ಸಂಸ್ಥೆಗಳಲ್ಲಿ ಜವಾಬ್ದಾರಿ ವಹಿಸುವವರು ತಮ್ಮ ಸಮಯವನ್ನು ಮೀಸಲಿಟ್ಟು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಬೆಳಗಾವಿ ಚೆಂಬರ್ ಉತ್ತಮ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿರುವುದನ್ನು ತಾನು ಹತ್ತಿರದಿಂದ ಗಮನಿಸುತ್ತಿದ್ದೇನೆ. ಈ ಹಿಂದೆಯೂ ಬಿಸಿಸಿಐ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಬೆಳಗಾವಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದು ಗಮನಾರ್ಹ ಹಾಗೂ ಸ್ವಾಗತಾರ್ಹ ಬೆಳವಣಿಗೆ ಎಂದು ಪ್ರತಿಮಾ ಧೋಂಡ್ ಮೆಚ್ಚುಗೆ ವ್ಯಕ್ತಪಡಿಸಿದರು.
ನೂತನ ಪದಾಧಿಕಾರಿಗಳ ಪದಗ್ರಹಣ
ಸಮಾರಂಭದಲ್ಲಿ ಸ್ವಪ್ನಿಲ್ ಶಹಾ ಅವರು ಬಿಸಿಸಿಐ ನೂತನ ಅಧ್ಯಕ್ಷರಾಗಿ ಹಾಗೂ ಮನೋಜಕುಮಾರ್ ಎನ್. ಮತ್ತಿಕೊಪ್ಪ ಗೌರವ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು.
ಉದಯ ಜೋಶಿ ಹಿರಿಯ ಉಪಾಧ್ಯಕ್ಷರಾಗಿ, ರಾಜೇಂದ್ರ ಮುತಗೆಕರ್ ದ್ವಿತೀಯ ಉಪಾಧ್ಯಕ್ಷರಾಗಿ, ವಿನಿತ್ ಹರಕುಣಿ ಜಂಟಿ ಕಾರ್ಯದರ್ಶಿಯಾಗಿ ಹಾಗೂ ರಮೇಶ್ ಲದ್ದಡ್ ಖಜಾಂಚಿಯಾಗಿ ಪದಗ್ರಹಣ ಮಾಡಿದರು.
2026–27ನೇ ಸಾಲಿನ ಆಡಳಿತ ಮಂಡಳಿ ಸದಸ್ಯರಾಗಿ ಸಂಜೀವ್ ಕತ್ತಿಶೆಟ್ಟಿ, ರೋಹಿತ್ ಎಸ್. ಕಪಾಡಿಯಾ, ವಿಕ್ರಂ ಜೈನ್, ಪ್ರಶಾಂತ್ ಕಳ್ಳಿಮನಿ, ಅಪ್ಪಾಸಾಹೇಬ್ ಗುರವ್, ಸಂಜಯ್ ಪೋದ್ದಾರ್, ವಿಜಯ್ ದರಗಶೆಟ್ಟಿ, ಸಚಿನ್ ಹಂಗಿರ್ಗೇಕರ್, ವೈಭವ್ ವೆರ್ಣೇಕರ, ಎಂ.ಕೆ. ಹೆಗಡೆ, ನಿತಿನ್ ಪೊರ್ವಾಲ್, ಸುಧೀರ್ ಡಿ. ಚೌಗುಲೆ, ಸಚಿನ್ ಸಬ್ನಿಸ್, ಸತೀಶ್ ಕುಲಕರ್ಣಿ, ರಾಜೇಶ್ ಮುಚಂಡಿಕರ್, ಅಶೋಕ್ ಕೋಳಿ, ಆನಂದ ದೇಸಾಯಿ, ಸಂದೀಪ್ ಬಾಗೇವಾಡಿ, ದಯಾನಂದ ನೇತಲ್ಕರ್ ಹಾಗೂ ಬಸವರಾಜ್ ರಾಂಪುರೆ ಅವರು ಅಧಿಕಾರ ಸ್ವೀಕರಿಸಿದರು.
ಸಂಗೀತಾ ಕಟಾರಿಯಾ ಪ್ರಾರ್ಥನೆ ಹಾಡಿದರು. ನಿರ್ಗಮಿತ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ ಸ್ವಾಗತಿಸಿ, ತಮ್ಮ ಅವಧಿಯಲ್ಲಿ ಕೈಗೊಂಡ ಪ್ರಮುಖ ಕಾರ್ಯಚಟುವಟಿಕೆಗಳು ಹಾಗೂ ಸಾಧನೆಗಳ ಕುರಿತು ವಿವರಿಸಿದರು. ನಿರ್ಗಮಿತ ಗೌರವ ಕಾರ್ಯದರ್ಶಿ ಸತೀಶ್ ಕುಲಕರ್ಣಿ ವಾರ್ಷಿಕ ವರದಿ ವಾಚಿಸಿದರು.
ಅನಿತಾ ಕಣಬರ್ಗಿ ಅತಿಥಿಗಳನ್ನು ಪರಿಚಯಿಸಿದರು. ಉಪಾಧ್ಯಕ್ಷ ರಾಜೇಂದ್ರ ಮುತಗೆಕರ್ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಪರಿಚಯಿಸಿದರು. ಅಭಿಷೇಕ ಮುತಗೆಕರ್ ಕಾರ್ಯಕ್ರಮ ನಿರೂಪಿಸಿದರು. ನೂತನ ಗೌರವ ಕಾರ್ಯದರ್ಶಿ ಮನೋಜ್ ಮತ್ತಿಕೊಪ್ಪ ವಂದಿಸಿದರು.
ಕಾರ್ಯಕ್ರಮದಲ್ಲಿ ಬಿಸಿಸಿಐನ ಮಾಜಿ ಅಧ್ಯಕ್ಷರು, ಹಾಲಿ ಹಾಗೂ ಮಾಜಿ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಉದ್ಯಮಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
Belagavi–Goa bonhomie should grow stronger: Pratima Dhond
BCCI’s new office-bearers take charge
Belagavi: The close business and cultural ties between Belagavi and Goa should be further strengthened in the coming days, said Pratima Dhond, President of the Goa Chamber of Commerce and Industry.
She was speaking as the chief guest at the installation ceremony of the newly elected office-bearers of the Belagavi Chamber of Commerce and Industry (BCCI), held at the Foundry Cluster Hall in Udyambag here on Friday evening.
Belagavi and Goa share a warm relationship like neighbouring regions. Several entrepreneurs from Belagavi are successfully doing business in Goa as well. There is good cooperation between the two regions in various areas, including industrial development and skill training. The Goa Chamber also enjoys a cordial relationship with BCCI and looks forward to strengthening this association further, she said.
Chambers of commerce are institutions that demand commitment and dedication. Those taking up responsibilities in such organisations need to devote their time and work with sincerity. She said she had been closely observing the good work being done by BCCI and had also participated in its programmes in the past.
It is encouraging to see a large number of women actively involved in entrepreneurship in Belagavi. This is a positive development and deserves appreciation, Dhond said.
New office-bearers take charge
At the ceremony, Swapnil Shah assumed charge as the new President of BCCI, while Manojkumar N. Mattikoppa took charge as Honorary Secretary.
Uday Joshi assumed charge as Senior Vice-President, Rajendra Mutgekar as Second Vice-President, Vinit Harkuni as Joint Secretary and Ramesh Laddad as Treasurer.
The newly elected members of the BCCI Managing Committee for 2026–27 also assumed office. They are Sanjeev Kattishetti, Rohit S. Kapadia, Vikram Jain, Prashant Kallimani, Appasaheb Gurav, Sanjay Poddar, Vijay Dargashetty, Sachin Hangirgekar, Vaibhav Vernekar, M.K. Hegde, Nitin Porwal, Sudhir D. Chougule, Sachin Sabnis, Satish Kulkarni, Rajesh Muchandikar, Ashok Koli, Anand Desai, Sandeep Bagawadi, Dayanand Netalkar and Basavaraj Rampure.
Sangeeta Kataria rendered the prayer. Outgoing President Prabhakar Nagaramunnoli welcomed the gathering and highlighted the major initiatives and achievements during his tenure. Outgoing Honorary Secretary Satish Kulkarni presented the annual report.
Anita Kanabargi introduced the guests. Vice-President Rajendra Mutgekar introduced the newly elected President and office-bearers. Abhishek Mutgekar compered the programme. Newly elected Honorary Secretary Manoj Mattikoppa proposed a vote of thanks.
Former presidents, present and former office-bearers, members of BCCI, representatives of various organisations, entrepreneurs and dignitaries were present at the programme.
बेळगाव–गोवा सौहार्दाचे संबंध आणखी दृढ व्हावेत : प्रतिमा धोंड
बीसीसीआयच्या नूतन पदाधिकाऱ्यांचा पदग्रहण सोहळा
बेळगाव : व्यावसायिक तसेच सांस्कृतिकदृष्ट्या बेळगाव आणि गोवा यांच्यात घनिष्ठ संबंध असून, हे सौहार्दाचे नाते भविष्यात आणखी दृढ होणे गरजेचे आहे, असे गोवा चेंबर ऑफ कॉमर्स अँड इंडस्ट्रीजच्या अध्यक्षा प्रतिमा धोंड यांनी सांगितले.
शहरातील उद्यमबाग येथील फाउंड्री क्लस्टर सभागृहात शुक्रवारी सायंकाळी आयोजित बेळगाव चेंबर ऑफ कॉमर्स अँड इंडस्ट्रीज (बीसीसीआय) च्या नूतन पदाधिकाऱ्यांच्या पदग्रहण सोहळ्यात प्रमुख पाहुण्या म्हणून सहभागी होऊन त्या बोलत होत्या.
बेळगाव आणि गोवा यांच्यात शेजारी राज्यांप्रमाणे जिव्हाळ्याचे संबंध आहेत. बेळगावातील अनेक उद्योजक गोव्यातही यशस्वीपणे व्यवसाय करीत आहेत. उद्योग विकास, कौशल्य प्रशिक्षण यासह विविध क्षेत्रांमध्ये दोन्ही राज्यांमध्ये चांगला समन्वय आणि सहकार्य आहे. गोवा चेंबरचेही बेळगाव चेंबरसोबत चांगले संबंध असून, हे संबंध आणखी दृढ करण्यासाठी गोवा चेंबर उत्सुक आहे, असे प्रतिमा धोंड यांनी सांगितले.
चेंबर ऑफ कॉमर्ससारख्या संस्थांमध्ये जबाबदारी स्वीकारणाऱ्यांकडून बांधिलकी आणि निष्ठेने काम करण्याची अपेक्षा असते. अशा संस्थांसाठी वेळ देण्याबरोबरच प्रामाणिकपणे कार्य करणे आवश्यक आहे. बेळगाव चेंबरकडून सुरू असलेल्या विविध उपक्रमांचे आपण जवळून निरीक्षण करीत आहोत. यापूर्वीही चेंबरच्या कार्यक्रमांना उपस्थित राहिले आहे. बेळगावमध्ये मोठ्या संख्येने महिला उद्योग क्षेत्रात सक्रियपणे सहभागी होत असल्याचे दिसून येत असून, ही निश्चितच स्वागतार्ह बाब आहे, असेही त्यांनी नमूद केले.
नूतन पदाधिकाऱ्यांचा पदग्रहण सोहळा
यावेळी स्वप्नील शहा यांनी बीसीसीआयच्या अध्यक्षपदाची, तर मनोजकुमार एन. मत्तिकोप्प यांनी मानद सचिवपदाची सूत्रे स्वीकारली.
उदय जोशी यांनी वरिष्ठ उपाध्यक्ष, राजेंद्र मुतगेकर यांनी द्वितीय उपाध्यक्ष, विनित हरकुणी यांनी संयुक्त सचिव, तर रमेश लद्दड यांनी कोषाध्यक्ष म्हणून पदभार स्वीकारला.
2026–27 या वर्षासाठी संचालक मंडळाच्या सदस्यांनीही पदभार स्वीकारला. यामध्ये संजीव कत्तिशेट्टी, रोहित एस. कपाडिया, विक्रम जैन, प्रशांत कळ्ळीमनी, अप्पासाहेब गुरव, संजय पोद्दार, विजय दरगाशेट्टी, सचिन हंगिरगेकर, वैभव वेर्णेकर, एम.के. हेगडे, नितीन पोर्वाल, सुधीर डी. चौगुले, सचिन सबनीस, सतीश कुलकर्णी, राजेश मुचंडिकर, अशोक कोळी, आनंद देसाई, संदीप बागेवाडी, दयानंद नेतळकर आणि बसवराज रामपुरे यांचा समावेश आहे.
संगीता कटारिया यांनी प्रार्थना सादर केली. मावळते अध्यक्ष प्रभाकर नागरमुन्नोळी यांनी स्वागत करून आपल्या कार्यकाळातील प्रमुख उपक्रम आणि कामगिरीचा आढावा घेतला. मावळते मानद सचिव सतीश कुलकर्णी यांनी वार्षिक अहवालाचे वाचन केले.
अनिता कणबर्गी यांनी पाहुण्यांचा परिचय करून दिला. उपाध्यक्ष राजेंद्र मुतगेकर यांनी नूतन अध्यक्ष व पदाधिकाऱ्यांचा परिचय करून दिला. अभिषेक मुतगेकर यांनी सूत्रसंचालन केले. नूतन मानद सचिव मनोज मत्तिकोप्प यांनी आभार मानले.
कार्यक्रमाला बीसीसीआयचे माजी अध्यक्ष, विद्यमान व माजी पदाधिकारी, सदस्य, विविध संघ-संस्थांचे पदाधिकारी, उद्योजक तसेच मान्यवर मोठ्या संख्येने उपस्थित होते.



