
ಪ್ರಗತಿವಾಹಿನಿ ಸುದ್ದಿ: ಆಂಧ್ರ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ರ್ಯಾಲಿ ವೇಳೆ ಘೋರ ದುರಂತವೊಂದು ಸಂಭವಿಸಿದೆ. ರ್ಯಾಲಿ ವೇಳೆ ನೂಕಾಟ-ತಳ್ಳಾಟ ನಡೆದು ಜಗನ್ ಕಾರಿನ ಚಕ್ರದಡಿ ಸಿಲುಕಿ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ.
ಆಮ್ಧ್ರದ ಪಲ್ನಾಡು ಜಿಲ್ಲೆಯ ಸತ್ತೇನಹಳ್ಳಿಯಲ್ಲಿ ಜೂನ್ 18ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 70 ವರ್ಷದ ಸಂಗಯ್ಯ ಮೃತ ದುರ್ದೈವಿ. ಅಂದು ನಡೆದ ರ್ಯಾಲಿಯಲ್ಲಿ ಕಾರ್ಯಕರ್ತರಿಂದ ಭಾರಿ ನೂಕಾಟ-ತಳ್ಳಾಟ ನಡೆದಿತ್ತು. ಈ ವೇಳೆ ವೃದ್ಧ ಸಂಗಯ್ಯ ಕೆಳಗೆ ಬಿದ್ದಿದ್ದಾರೆ. ರ್ಯಾಲಿಯಲ್ಲಿ ಬರುತ್ತಿದ್ದ ಜಗನ್ ಕಾರಿನ ಚಕ್ರದಡಿ ಸಿಲುಕಿ ಅವರು ಸಾವನ್ನಪ್ಪಿದ್ದಾರೆ.
ರ್ಯಾಲಿಯ ಜನಸಾಗರ, ಜಯಘೋಷಗಳ ನಡುವೆ ಕೆಳಗೆ ಬಿದ್ದು ಕಾರಿನ ಚಕ್ರದಡಿ ವ್ಯಕ್ತಿ ಸಿಲುಕಿ ಸಾವನ್ನಪ್ಪಿದ್ದೂ ಯಾರುಗೂ ಗೊತ್ತೇ ಇರಲಿಲ್ಲ. ಆದರೆ ರ್ಯಾಲಿಯ ವಿಡಿಯೋ ಈಗ ವೈರಲ್ ಆಗುತ್ತಿದ್ದಂತೆ ಕಾರಿನ ಚಕ್ರದಡಿ ಸಿಲುಕಿ ವ್ಯಕ್ತಿ ಮೃತಪಟ್ಟಿರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಕಾರು ಚಾಲಕ ರಮಣ್, ಮಾಜಿ ಸಿಎಂ ಜಗನ್ ವಿರುದ್ಧ ಪ್ರಕರಣ ದಾಖಲಾಗಿದೆ. ಕಾರು ಚಾಲಕನನ್ನು ಬಂಧಿಸಲಾಗಿದೆ.