
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಬಾಮನವಾಡಿ ಕ್ರಾಸ್ ಹತ್ತಿರದ ಸಂತಿಬಸ್ತವಾಡ ಗ್ರಾಮದಲ್ಲಿ ಗೋವಾ ರಾಜ್ಯದ ಮಧ್ಯ ಸಾಗಾಟ ಮಾಡುವಾಗ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಯಾನಂದ ಕುಮನ್ನಾ ಕರಂಬಾಳಕರ, ವಿಶಾಲ ಪುಂಡಲೀಕ ಕೊಡಚವಾಡಕರ ಬಂದಿತ ಆರೋಪಿಗಳು. ಇವರು ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕಿರುವ 14.04 ಲೀಟರ್ ಅಕ್ರಮ ಸರಾಯಿ (180 ಎಂಎಲ್ ನ ಡಿಎಸ್ಪಿ ಬ್ಲಾಕ್ ಕಂಪನಿಯ ಒಟ್ಟು 78 ಸರಾಯಿ ಬಾಟಲಿಗಳು) ಸಾಗಾಟದಲ್ಲಿ ತೊಡಗಿದ್ದಾಗ ಬೆಳಗಾವಿ ಗ್ರಾಮೀಣ ಠಾಣೆಯ ಪಿಎಸ್ಐ ಸಂತೋಷ ದಳವಾಯಿ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ, ಅಕ್ರಮ ಸರಾಯಿ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ.34/2026 ಕಲಂ.32, 34 ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ.




