
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೇಂದ್ರ ಸರ್ಕಾರದ ರೈತರ ಐಡಿ ನೀಡಲು ಕರ್ನಾಟಕ ರಾಜ್ಯ ಸರ್ಕಾರದ FID ಮತ್ತು PMK ID ಹೊಂದಿರುವ ಎಲ್ಲಾ ರೈತರು ಮೋಬೈಲ್ ನಂಬರ್ ತಿದ್ದುಪಡಿ, e-KYC, ರೈತರ ಫಾರ್ಮರ್ ಕನ್ಸೆಂಟ್, ಲ್ಯಾಂಡ್ ಡಿಕ್ಲರೇಷನ್ ಅಂಶಗಳನ್ನು ಕಡ್ಡಾಯ ಹಾಗೂ ತ್ವರಿತವಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ “ಆಧಾರ OTP” (ಆಧಾರ್ ನೊಂದಾಯಿತ ಮೊಬೈಲ್ ಸಂಖ್ಯೆ ಮೂಲಕ) ನೀಡುವುದರ ಮುಖಾಂತರ ಮಾಡಿಕೊಳ್ಳಬೇಕು.
ರೈತರಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳಿಂದ ಅನುಷ್ಠಾನಗೊಳಿಸುವ ವಿವಿಧ ಯೋಜನೆಗಳಾದ ಪಿ.ಎಂ-ಕಿಸಾನ್, ಬರ ಪರಿಹಾರ, ಬೆಳೆ ವಿಮೆ, ಬೆಂಬಲ ಬೆಲೆ ಸಹಾಯಧನವನ್ನು ಪಡೆಯಲು ಕಡ್ಡಾಯವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹೋಬಳಿ/ತಾಲ್ಲೂಕು ಮಟ್ಟದ ತೋಟಗಾರಿಕೆ ಅಧಿಕಾರಿಗಳ ದೂರವಾಣಿ ಸಂಖ್ಯೆ ಬೆಳಗಾವಿ 9886400526, 9449517449, 9886909153, 3 9513481947, ಅಥಣಿ 9036995750, ರಾಮದುರ್ಗ 9632198334, ರಾಯಬಾಗ 8904381481, ಹುಕ್ಕೇರಿ 9886609248, 28 9742436124, 0 8951052518 ಗೆ ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



