Belagavi NewsBelgaum NewsKannada NewsKarnataka NewsLatestSports

*ಯಳ್ಳೂರನಲ್ಲಿ ಕುಸ್ತಿ ಪಂದ್ಯಾವಳಿ ಆಯೋಜನೆ*

ಪ್ರಗತಿವಾಹಿನಿ ಸುದ್ದಿ: ತಾಲೂಕಿನ ಯಳ್ಳೂರ ಗ್ರಾಮದಲ್ಲಿ ಕಲ್ಮೇಶ್ವರ, ಚಾಂಗಳೇಶ್ವರಿ ಮತ್ತು ಮಹಾಲಕ್ಷ್ಮೀ ದೇವಿ ಜಾತ್ರೆಯ ಪ್ರಯುಕ್ತ ಏ.16ರಂದು ಮಧ್ಯಾಹ್ನ 2ರಿಂದ ‘ಲೋಕಮಾನ್ಯ ಕೇಸರಿ‘ ಶೀರ್ಷಿಕೆಯಡಿ ಕುಸ್ತಿ ಪದ್ಯಾವಳಿ ಆಯೋಜಿಸಲಾಗಿದೆ.

ಪಂದ್ಯಾವಳಿ ಉದ್ಘಾಟನೆಯಲ್ಲಿ ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಲೋಕಮಾನ್ಯ ವಿವಿಧೋದ್ದೇಶ ಸೊಸೈಟಿ ಸಂಸ್ಥಾಪಕ ಕಿರಣ ಠಾಕೂರ, ಕಾಂಗ್ರೆಸ್ ಯುವಕ ಮುಖಂಡ ಮೃಣಾಲ ಹೆಬ್ಬಾಳ್ಕರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ ಜಾರಕಿಹೊಳಿ, ಇತರರು ಪಾಲ್ಗೊಳ್ಳುವರು.

ಪಂದ್ಯಾವಳಿಯಲ್ಲಿ ಪ್ರಮುಖ ಆಕರ್ಷಣೆಯಾಗಿ ಅಂತಾರಾಷ್ಟ್ರೀಯ ಮಟ್ಟದ ಪೈಲ್ವಾನ ಮಿರ್ಜಾ ಇರಾನ್ ವಿರುದ್ಧ ಭಾರತ ಕೇಸರಿ ಸಾಹಿಲ್ ಕೊಲಿ, ಹರ್ಷವರ್ಧನ ಸದಗೀರ-ನಿರು ಗುರ್ಜರ, ಪೃಥ್ವಿರಾಜ ಪಾಟೀಲ-ಮುಸಾ ಪಂಜಾಬ, ರಾಹುಲ ಸುಳ-ರಾಘು ಟೊಂಬರೆ, ಸುಭೋಧ ಪಾಟೀಲ ವಿರುದ್ಧ ಹಿತು ಠಾಕೂರ ಸೇರಿದಂತೆ ಒಟ್ಟು 88 ಜೋಡಿ ಪೈಲ್ವಾನರು ಸೆಣಸಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


Home add -Advt

Related Articles

Back to top button